ಹಳಿಯಾಳ:-
ರಾಜ್ಯ ಸರ್ಕಾರ ಹಿಂದೂ ದೇವಾಲಯಗಳಿಗೆ ಆಡಳಿತ ಸಮಿತಿ ನೇಮಕ ವಿಚಾರ ಹಿಂಪಡೆಯಬೇಕು, ಪಡಿತರ ಚೀಟಿ ಹಾಗೂ ಪಡಿತರ ವಿತರಣಾ ವ್ಯವಸ್ಥೆಯನ್ನು ಸರಳಿಕರಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜೆಡಿಎಸ್ ಪಕ್ಷ ಹಳಿಯಾಳ ಘಟಕದವರು ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಿದರು.
ಜೆಡಿಎಸ್ ಪಕ್ಷ ಹಳಿಯಾಳ ತಾಲೂಕಾ ಅಧ್ಯಕ್ಷ ಕೈತಾನ ಬಾರಬೋಜಾ ಮುಂದಾಳತ್ವದಲ್ಲಿ ಸಭೆ ನಡೆಸಿದ ಕಾರ್ಯಕರ್ತರು ಪ್ರತಿಭಟನಾ ಮೇರವಣೀಗೆಯ ಮೂಲಕ ಇಲ್ಲಿಯ ತಹಶೀಲ್ದಾರ್ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿದರು.
ಮನವಿಯಲ್ಲಿ ಭತ್ತದ ಬೆಳೆ ಬೆಂಕಿ ರೋಗಕ್ಕೆ ತುತ್ತಾಗಿ ಸಂಪೂರ್ಣ ಹಾಳಾಗಿದ್ದು ಕೂಡಲೇ ಪರಿಹಾರ ನೀಡಬೇಕು, ಬೆಳೆ ವಿಮೆ ಮಂಜೂರಿ ಕಡಿತಗೊಳಿಸಿದ ಹಣವನ್ನು ರೈತರ ಖಾತೆಗಳಿಗೆ ಕೂಡಲೇ ಜಮಾ ಮಾಡಬೇಕು, ಸಾಗುವಳಿಯಾದ ಅರಣ್ಯ ಅತಿಕ್ರಮಣ ಜಮೀನನ್ನು ಸಕ್ರಮಗೊಳಿಸಬೇಕು, ಹೈನುಗಾರಿಕೆ ಮತ್ತು ಪ್ರವಾಸೋಧ್ಯಮ ಇಲಾಖೆಯ ಯೋಜನೆಗಳಲ್ಲಿ ಅರ್ಹತೆ ಇದ್ದ ಫಲಾನುಭವಿಗಳನ್ನು ಮಾತ್ರ ಆಯ್ಕೆ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಜೆಡಿಎಸ್ ಪಕ್ಷ ಹಳಿಯಾಳ ಘಟಕ ಆಗ್ರಹಿಸಿದೆ.
ಮನವಿ ಸಲ್ಲಿಸುವಾಗ ಪ್ರಧಾನ ಕಾರ್ಯದರ್ಶಿ ಬಡೇಸಾಬ ಕಕ್ಕೇರಿ, ಉಪಾಧ್ಯಕ್ಷ ನಸರುಲ್ಲಾಖಾನ್, ಮುಖಂಡರಾಧ ಶಾಂತಾರಾಮ ಜಾವಳೆಕರ, ಸುಧಾ ಗೌಡಾ, ಮಾರುತಿ ಬುಜಿ, ಆನಂದ, ರವಿ ವಡ್ಡರ ಮೊದಲಾದವರು ಇದ್ದರು.
Leave a Comment