ಹಳಿಯಾಳ :-
ಅ.14ರಿಂದ ಕೇರಳ ರಾಜ್ಯದ ಅಧ್ಯಾತ್ಮಿಕ ನಗರ ಪೊಟ್ಟಾದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಏಳು ದಿನಗಳ ಕಾಲ ನಡೆಯಲಿರುವ ಅಧ್ಯಾತ್ಮಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲು ಹಳಿಯಾಳ ತಾಲೂಕಿನ 28 ಶ್ರದ್ಧಾಳುಗಳು ಆಧ್ಯಾತ್ಮಿಕ ಯಾತ್ರೆಯನ್ನು ಕೈಗೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಜಗತ್ತಿನೆಲ್ಲೆಡೆಯಿಂದ ಖ್ಯಾತ ಪ್ರವಚನಕಾರರು, ವಾಗ್ಮಿಗಳು, ಅಧ್ಯಾತ್ಮಿಕ ಚಿಂತಕರು ಇದರಲ್ಲಿ ಪಾಲ್ಗೋಳ್ಳಲಿದ್ದಾರೆ. ಪೊಟ್ಟಾಕ್ಕೆ ತೆರಳುವ ತಂಡದಲ್ಲಿ ಹಳಿಯಾಳ ಪಟ್ಟಣ, ಗ್ರಾಮಾಂತರ ಭಾಗದ ಜನರಿದ್ದು, ತಂಡದ ನೇತ್ರತ್ವವನ್ನು ಕೈತಾನ ಬಾರಬೋಜ ವಹಿಸಿದ್ದು ವಾಡಾ ಚರ್ಚನ ಗುರು ರೊನಾಲ್ಡೊ ಅಧ್ಯಾತ್ಮಿಕ ಮಾರ್ಗದರ್ಶಕರಾಗಿ ಪಾಲ್ಗೋಂಡಿದ್ದಾರೆ. ಮಧ್ಯಾಹ್ನ ಮಿಲಾಗ್ರಿಸ್ ಚರ್ಚನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಚರ್ಚ ಗುರು ಜ್ಞಾನಪ್ರಕಾಶ ಹಾಗೂ ಸಹಾಯಕ ಗುರು ರೋನಿ ತಂಡಕ್ಕೆ ಶುಭಕೋರಿ ಬೀಳ್ಕೋಟ್ಟರು. ಪುರಸಭಾ ಮಾಜಿ ಅಧ್ಯಕ್ಷೆ ಹನೋರಿಯಾ ಬೃಗಾಂಜಾ, ಮಾಜಿ ಉಪಾಧ್ಯಕ್ಷ ಸಂತಾನ ಸಾವಂತ, ರೋಹನ್ ಬೃಗಾಂಜಾ ಇದ್ದರು.
Leave a Comment