ಕಾರವಾರ:
ನಗರ ವ್ಯಾಪ್ತಿಯಲ್ಲಿರುವ ಕುಗ್ರಾಮ ಗುಡ್ಡೆಹಳ್ಳಿಗೆ ನಿರ್ಮಾಣ ಮಾಡಿರುವ ರಸ್ತೆಯು ಹದಗೆಟ್ಟಿದ್ದು ಕೂಡಲೇ ಈ ರಸ್ತೆಯನ್ನು ದುರಸ್ಥಿಗೊಳಿಸಬೇಕು ಎಂದು ಇಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.
ನಗರ ಸಭೆ ಕಾರ್ಯಾಲಯಕ್ಕೆ ಆಮಿಸಿದ ಗುಡ್ಡೆಹಳ್ಳಿಯ ನಿವಾಸಿಗಳು ಪೌರಾಯುಕ್ತರನ್ನು ಭೇಟಿಯಾಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಗುಡ್ಡೆಹಳ್ಳಿಯು ರಸ್ತೆ ಸಂಪರ್ಕವಿಲ್ಲದೇ ಸುಮಾರು 7 ಕಿ.ಮೀ. ನಡೆದೇ ಪ್ರಯಾಣಿಸಬೇಕಾದ ಅನಿವಾರ್ಯತೆ ಇತ್ತು. ಇಲ್ಲಿನ ಜನರು ತಮ್ಮ ಎಲ್ಲ ಅಗತ್ಯ ವಸ್ತುಗಳನ್ನು ತಲೆಯ ಮೇಲೆ ಹೊತ್ತುಕೊಂಡೆ ಒಯ್ಯಬೇಕಾದ ಪರಿಸ್ಥಿತಿ ಇದೆ. ಆದರೆ ಕಳೆದ ಮಳೆಗಾಲಕ್ಕೂ ಪೂರ್ವದಲ್ಲಿ ನಗರದ ಹೈಚರ್ಚ್ ಬಳಿಯಿಂದ ಸುಮಾರು 5ಕಿ.ಮೀ. ವರೆಗೆ ರಸ್ತೆಯನ್ನು ನಿರ್ಮಾಣ ಮಡಲಾಗಿತ್ತು. ಜೆಸಿಬಿ ಬಳಸಿ ನಿರ್ಮಿಸಲಾದ ಈ ಕಚ್ಚಾ ರಸ್ತೆಯಿಂದ ಸಂಪೂರ್ಣವಾಗಿಲ್ಲದಿದ್ದರೂ ಅವಶ್ಯಕ ಮಟ್ಟಿಗೆ ಎಲ್ಲರಿಗೆ ಸಹಾಯಕವಾಗಿತ್ತು. ಆದರೆ ಮಳೆಗಾಲ ಪ್ರಾರಂಭವಾದ ಬಳಿಕ ನೀರಿನ ಒತ್ತಡಕ್ಕೆ ಈ ರಸ್ತೆಯು ಅಲ್ಲಲ್ಲಿ ಕೊಚ್ಚಿ ಹೋಗಿದ್ದು ವಾಹನಗಳನ್ನು ಒಯ್ಯಲು ಸಾಧ್ಯವಾಗುತ್ತಿಲ್ಲ. ಬಳಿಕ ಈ ವಿಷಯವನ್ನು ವಾರ್ಡ್ ಸದಸ್ಯರ ಗಮನಕ್ಕೆ ತಂದಾಗ ಜೆಸಿಬಿ ಬಳಸಿ ಸರಿ ಮಾಡಿಸಿದ್ದರು. ಅದಾದ ಬಳಿಕ ಮತ್ತೆ ಸುರಿದ ಭಾರೀ ಮಳೆಗೆ ರಸ್ತೆಯು ಕೊಚ್ಚಿ ಹೋಗಿದೆ. ಈಗ ಮಳೆಯೂ ಕಡಿಮೆ ಯಾಗುತ್ತಿರುವ ಕಾರಣ ಇನ್ನೊಮ್ಮೆ ಸರಿ ಪಡಿಸಿ ಕೊಳ್ಳಲು ವಿನಂತಿಸಿದ್ದೆವು. ಆದರೆ ವಿಷಯ ತಿಳಿಸಿ ಬಹಳ ದಿನಗಳಾದರೂ ಯಾವುದೇ ಕಾಮಗಾರಿಗಳು ನಡೆದಿಲ್ಲ. ಆದ್ದರಿಂದ ತಾವೆಲ್ಲ ಇಲ್ಲಿಗೆ ಬಂದು ತಮಗೆ ಮಾಹಿತಿ ನೀಡಿದ್ದೇವೆ. ಶೀಘ್ರದಲ್ಲಿ ರಸ್ತೆಯನ್ನು ದುರಸ್ತಿ ಮಾಡಿಸಿ ಕೊಡಬೇಕು ಎಂದು ಪೌರಾಯುಕ್ತರಲ್ಲಿ ವಿನಂತಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಪೌರಾಯುಕ್ತ ಯೋಗೀಶ್ವರ ಇನ್ನು ಒಂದು ವಾರದೊಳಗೆ ಜೆಸಿಬಿ ಕಳುಹಿಸಿ ರಸ್ತೆಯನ್ನು ಸರಿಪಡಿಸಿ ಕೊಡಲಾಗುವುದು ಎಂದು ಭರವಸೆ ನೀಡಿದರು. ಗುಡ್ಡೆಹಳ್ಳಿಯ ನಿವಾಸಿಗಳಾದ ಸುರೇಶ ಗೌಡ, ರಮೇಶ ಗೌಡ, ಯಂಕು ಗೌಡ, ಮಹೇಂದ್ರ ಗೌಡ, ಶಿವಾನಂದ ಗೌಡ ಮುಂತಾದವರು ಇದ್ದರು
Leave a Comment