ಹಳಿಯಾಳ:
ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗಗಳಲ್ಲಿ ಪೋಲಿಸರ ಹದ್ದಿನ ಕಣ್ಣು ತಪ್ಪಿಸಿ ನಡೆಯುತ್ತಿವೆ ಅಕ್ರಮ ಜೂಜು ಅಡ್ಡೆಗಳು ಇವು ದೀಪಾವಳಿ ಸಂದರ್ಭದಲ್ಲಿ ಹಬ್ಬದ ನೆಪ ಮಾಡಿ ಸಂಬಂಧ ಪಟ್ಟವರಿಂದ ಅಲಿಖಿತ ಹಾಗೂ ಅಕ್ರಮ ಪರವಾನಿಗೆ ಪಡೆದು ಕೊಟ್ಯಂತರ ರೂ ಅಕ್ರಮ ವ್ಯವಹಾರ ನಡೆಸಿ ಯುವಕರು, ಕಾರ್ಮಿಕರನ್ನು ಬೀದಿಗೆ ತಳ್ಳುವ ದಂಧೆಗೆ ಈಗಾಗಲೇ ಭರ್ಜರಿ ತಯಾರಿ ಹಳಿಯಾಳದಲ್ಲಿ ನಡೆದಿರುವ ಬಗ್ಗೆ ಪಟ್ಟಣದಲ್ಲಿ ಚರ್ಚೆಯಾಗುತ್ತಿದೆ.
ಹಳಿಯಾಳದಲ್ಲಿ ಅಂದರ ಬಾಹರ್-ಮಟ್ಕಾ, ವೈಶ್ಯಾವಾಟಿಕೆ, ಅಕ್ರಮ ಸರಾಯಿ ಮಾರಾಟ, ಕ್ರಿಕೇಟ ಬೆಟ್ಟಿಂಗ್ ನಂತಹ ಅಕ್ರಮ ಚಟುವಟಿಕೆಗಳಿಗೇನೂ ಕೊರತೆಯಿಲ್ಲ. ಇವೆಲ್ಲವೂ ಹಾಡು ಹಗಲೇ ರಾಜಾರೋಷವಾಗಿ ನಡೆಯುತ್ತಿವೆ. ಇದನ್ನು ನಿಯಂತ್ರಿಸುವವರೂ ಇಲ್ಲ. ಇದರ ಬಗ್ಗೆ ಮಾತಾಡುವವರೂ ಇಲ್ಲ. ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಇದರ ನಡುವೆಯೇ ನಗರದಲ್ಲಿ ಪ್ರತೀ ದೀಪಾವಳಿಯ ಸಂದರ್ಭದಲ್ಲಿ ಅಕ್ರಮ ಇಸ್ಫೀಟ್ ಅಡ್ಡೆಗಳ ದರ್ಬಾರ ಜೋರಾಗಿರುತ್ತದೆ. ದೀಪಾವಳಿಯ ನಾಲೈದು ದಿನಗಳಿಗಷ್ಠೇ ಸಿಮಿತವಾಗಿ ನಡೆಯುವ ಈ ಆಟವನ್ನು ಇದೊಂದು ವೀಶೇಷ ಇಸ್ಪೀಟ್ ಅಡ್ಡೆಗಳ ಶಿಬಿರ ಎಂದು ಕರೆಯಬುಹುದು.
ದೀಪಾವಳಿ ಹಬ್ಬದ ಆಸು ಪಾಸಿನ ನಾಲ್ಕೈದು ದಿನಗಳಿಗಷ್ಟೇ ನಡೆಯುವ ಈ ಇಸ್ಪೀಟ್ ಈ ಭಾಗದ ಜನರ ಒಂದು ಶೋಖಿ ಎನ್ನಬಹುದು. ಈ ಭಾಗದಲ್ಲಿ ಇದೊಂಥರ ಹಬ್ಬದ ಭಾಗವೆಂಬಂತೆ ನಡೆದು ಹೋಗಿಬಿಡುತ್ತದೆ, ಹಬ್ಬದ ದಿನವಿಡೀ ಇಸ್ಪೀಟ್ ಅಡ್ಡೆಗಳಲ್ಲಿಯೇ ಕಳೆಯುವ ಮಹಾಶಯರೂ ನಗದು, ಬಂಗಾರ, ಬೈಕ್, ವಾಹನ ಸೇರಿದಂತೆ ಎಲ್ಲವನ್ನು ಸೋಲುವುದಲ್ಲದೇ ಇಲ್ಲಿ ಪ್ರತಿದಿನಕ್ಕೆ ಶೇ.15 ಬಡ್ಡಿಯಂತೆ ಹಣ ನೀಡುವ ದುರುಳರಿದ್ದು ಅವರಿಂದ ಹಣ ಪಡೆದು ಆ ಹಣ ದುಪ್ಪಟ್ಟಾಗಿ ಅದನ್ನು ತೀರಿಸಲಾಗದೆ ಮನೆಗಳನ್ನು ಮಾರುವ ಮಾರಾಟ ಮಾಡಿರುವ ಸಾಕಷ್ಟು ಘಟನೆಗಳು ಈಗಾಗಲೇ ಪಟ್ಟಣದಲ್ಲಿ ನಡೆದಿದ್ದು ಈ ನಾಲ್ಕೈದು ದಿನಗಳ ಇಸ್ಪೀಟ್ ಅಡ್ಡೆಗಳಿಗಾಗಿಯೇ ಅಲಿಖಿತ ಪರವಾನಿಗೆಯನ್ನು ಸಂಬಂದಪಟ್ಟವರು ನೀಡಿ ಜನ ನಷ್ಠ ಅನುಭವಿಸಲು ಪರೋಕ್ಷವಾಗಿ ಕಾರಣರಾಗುತ್ತಾರೆ.
ದೀಪಾವಳಿಯ ಈ ನಾಲ್ಕೈದು ದಿನಗಳ ಇಸ್ಪೀಟ್ ಅಡ್ಡೆಗಳು ಪಟ್ಟಣದ ಹತ್ತಾರು ಕಡೆಗಳಲ್ಲಿ ನಡೆಯುತ್ತದೆ. ಆದರೇ ಇಲಾಖೆಯವರಂತೂ ಆಕಡೆ ಮುಖವನ್ನೂ ಹಾಕುವುದಿಲ್ಲವಂತೆ. ಪ್ರತಿಯೊಬ್ಬ ಇಸ್ಪೀಟ್ ದೊರೆಗಳೂ ಸಹ ಈ ನಾಲ್ಖೈದು ದಿನಗಳಿಗಾಗಿಯೇ ಲಕ್ಷಾಂತರ ರೂ ಕೊಡುತ್ತಾರೆ ಅಲ್ಲದೇ ಅವರು ಲಕ್ಷಾಂತರ ರೂ ಗಳಿಸುತ್ತಾರೆ.
ಈ ನಾಲ್ಕೈದು ದಿನಗಳ ಇಸ್ಪೀಟ್ ಆಟದಲ್ಲಿ ಕೋಟ್ಯಂತರರೂ.ಗಳ ವ್ಯವಹಾರ ನಡೆಯುತ್ತದೆ. ದಾಂಡೇಲಿ, ಜೋಯಿಡಾ, ಅಳ್ನಾವರ, ಕಲಘಟಗಿ, ನಿಂಗನಮಠ, ಧಾರವಾಡ, ಹುಬ್ಬಳ್ಳಿ, ಖಾನಾಪೂರ, ಬೆಳಗಾವಿ ಸೇರಿದಂತೆ ವಿವಿದೆಡೆಯ ಜನರು ಇಲ್ಲಿಗೆ ಇಸ್ಪೀಟ್ ಆಡಲು ಬರುತ್ತಾರೆ. ಇಸ್ಪೀಟ್ ಆಡಿಸುವ ಫಂಡ ಮಾಲಿಕರು ಮಾತ್ರ ಕೇವಲ ಲಾಲ್ಕೈದು ದಿನಗಳಲ್ಲಿ ಲಕ್ಷಾಂತರ ರೂ. ಕಮಾಯಿಸಿ ತನ್ನ ವರ್ಷದ ದುಡಿಮೆಯನ್ನು ಮಾಡಿಕೊಳ್ಳುತ್ತಾರೆ ಆದರೇ ಆಡುವವರು ಮಾತ್ರ ಬೀದಿಗೆ ಬಿಳುತ್ತಾರೆ.
ಇನ್ನೂ ಸಾಮಾಜಿಕ ಚಟುವಟಿಕೆ ಹಾಗೂ ಕ್ರೀಡೆಗಳಿಗೆ ಪರವಾನಿಗೆ ಪಡೆದುಕೊಂಡ ಬಂದಿರುವ ಕೆಲ ಕ್ಲಬ್ಗಳು ರಾಜಾರೋಷವಾಗಿ ಪಟ್ಟಣದಲ್ಲಿ ಲಕ್ಷಾಂತರ ರೂ. ಇಸ್ಪಿಟ್ ಎಲೆಗಳ ರಮ್ಮಿ ಆಟ ನಡೆಸಿ ಯುವಕರು, ನೌಕರರು ಹಾಗೂ ಕಾರ್ಮಿಕರನ್ನು ಬೀದಿಗೆ ತಳ್ಳುವ ಕಾಯಕದಲ್ಲಿ ತೊಡಗಿದ್ದು ಅಲ್ಲದೇ ಈಗಾಗಲೇ ಹಳಿಯಾಳದಲ್ಲಿ ನಡೆಯುವ ಅಂದರ್-ಬಾಹರ್ ಜೂಜು ಅಡ್ಡೆಗಳ ಬಗ್ಗೆ ರಾಜ್ಯಾದ್ಯಂತ ಪ್ರಸಿದ್ದಿ ಪಡೆದಿದ್ದು ಸದ್ಯ ನಡೆಯುತ್ತಿರುವ ಈ ಆಟಗಳಿಗೆ ರಾಜ್ಯದ ವಿವಿಧ ಭಾಗಗಳಿಂದ ಜನ ಆಗಮಿಸುತ್ತಿದ್ದು ಕೊಟ್ಯಂತರ ರೂ. ವ್ಯವಹಾರ ನಡೆಯುತ್ತಿದ್ದು ಸಂಬಂಧಪಟ್ಟ ಇಲಾಖೆ ಈಗಲಾದರೂ ಎಚ್ಚೆತ್ತುಕೊಂಡು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಿದೆ.
Leave a Comment