ಕಾರವಾರ:
ಹೊಟೆಗಾಳಿಯಲ್ಲಿ ಸಾಗಾಟಕ್ಕಾಗಿ ದ್ವಿಚಕ್ರ ವಾಹನಗಳಲ್ಲಿ ಸಂಗ್ರಹಿಸಿಟ್ಟ ಸುಮಾರು 1.20 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯವನ್ನು ಅಬಕಾರಿ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ.
ಭೀಮಕೋಲ ಡ್ಯಾಂ ರಸ್ತೆ ಬದಿಯಲ್ಲಿ 3 ದ್ವಿಚಕ್ರ ವಾಹನಗಳಲ್ಲಿ ಸಾಗಾಟಕ್ಕಾಗಿ ಅಕ್ರಮ ಮದ್ಯವನ್ನು ಸಂಗ್ರಹಿಸಿಡಲಾಗಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿದ ಅಬಕಾರಿ ಅಧಿಕಾರಿಗಳು 3 ದ್ವಿಚಕ್ರ ವಾಹನಗಳು ಹಾಗೂ ಅವುಗಳಲ್ಲಿ ದಾಸ್ತಾನಿಡಲಾಗಿದ್ದ 21 ಚಿಲಗಳಲ್ಲಿದ್ದ ಗೋವಾದ ಮದ್ಯ, ಬೀರ್ ಹಾಗೂ ಫೆನ್ನಿಯನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಮದ್ಯದ ಒಟ್ಟೂ ಮೌಲ್ಯ 1.20 ¯ಕ್ಷ ರೂ. ಎಂದು ಅಂದಾಜಿಸಲಾಗಿದ್ದು 3 ಬೈಕ್ಗಳ ಮೌಲ್ಯ 30 ಸಾವಿರ ರೂ.Éಂದು ಅಂದಾಜಿಲಾಗಿದ್ದು ಒಟ್ಟೂ ಒಂದೂವರೆ ಲಕ್ಷ ರೂ. ಮೌಲ್ಯವಾಗಿದೆ. ಈ ಸಂದರ್ಭದಲ್ಲಿ ಸ್ಥಳದಲ್ಲಿ ವಾಹನಗಳಷ್ಟೆ ಇದ್ದು ಯಾವುದೇ ವ್ಯಕ್ತಿಗಳು ಇರಲಿಲ್ಲ ಎಂದು ಅಬಕಾರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಿಲ್ಲೆಯ ಅಬಕಾರಿ ಉಪ ಆಯುಕ್ತ ಎನ್. ಶಾಮಜೋಯಿಸ್ ಅವರ ನಿರ್ದೇಶನದಲ್ಲಿ ಅಬಕಾರಿ ಉಪ ಅಧೀಕ್ಷಕ ಮಂಜುನಾಥ ವಿ. ಅರೆಗುಳಿ ಮಾರ್ಗದರ್ಶನದಂತೆ ಅಬಕಾರಿ ನಿರೀಕ್ಷಕಿ ಸುವರ್ಣಾ ಬಿ. ನಾಯ್ಕ ನೇತೃತ್ವದಲ್ಲಿ ದಾಳಿ ಮಾಡಿ ವಶ ಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ದಾಳಿಯ ಸಂದರ್ಭದಲ್ಲಿ ಅಬಕಾರಿ ರಕ್ಷಕರಾದ ಎಸ್.ವೈ.ಭೋವಿ, ಎನ್.ಎನ್.ಖಾನ್, ಶಿವಾನಂದ ಕೋರಡ್ಡಿ, ಗೋಪಾಲ ನಾಯ್ಕ ಹಾಗೂ ವಾಹನ ಚಾಲಕರಾದ ಶಾನೂರ ಜಮಾದಾರ, ಬಸವರಾಜ ಕರೆಣ್ಣವರ, ವಿನೋದ ನಾಯ್ಕ ಹಾಗೂ ಅರುಣ ಅಂಕೋಲೇಕರ ಇದ್ದರು.
Leave a Comment