ಕಾರವಾರ:
ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ರಾಜ್ಯದಲ್ಲಿ ಅಧಿಕಾರ ಹಿಡಿಯುವ ನೈತಿಕತೆಯಿಲ್ಲ ಎಂದು ಜೆಡಿಎಸ್ ಮುಖಂಡ ಪುರುಷೋತ್ತಮ ಸಾವಂತ ಆರೋಪಿಸಿದ್ದಾರೆ.
ಈ ಕುರಿತು ಲಿಖಿತ ಹೇಳಿಕೆ ನೀಡಿರುವ ಅವರು, ರಾಜ್ಯದ ಎರಡೂ ರಾಷ್ಟ್ರೀಯ ಪಕ್ಷಗಳು ರಾಜ್ಯದ ಅಭಿವೃದ್ಧಿಯ ಹೆಸರಿನಲ್ಲಿ ರಾಜ್ಯವನ್ನು ಲೂಟಿ ಹೊಡೆದು ತಮ್ಮ ತಮ್ಮ ಹೈಕಮಾಂಡಗಳಿಗೆ ಸಾವಿರಾರು ಕೋಟಿ ರೂಪಾಯಿ ಕಪ್ಪುಕಾಣಿಕೆ ಕಳಿಸಿ ಕೊಡುವ ಮೂಲಕ ಇಡೀ ಕರ್ನಾಟಕ ರಾಜ್ಯವನ್ನು ಲೂಟಿ ಹೊಡೆದಿದ್ದಾರೆ. ಈಗಾಗಲೇ ಗೋವಿಂದ ರಾಜು ಪ್ರಕರಣದಲ್ಲಿ ಸಿಕ್ಕಂತಹ ಡೈರಿಯಲ್ಲಿ ಮತ್ತು ಸಮಾರಂಭವೊಂದರಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಕೇಂದ್ರ ಸಚಿವರಾದ ಅನಂತಕುಮಾರ ಇವರು ಸಂಭಾಷಣೆ ಒಂದರಲ್ಲಿ ತಾವು ಇಂತಿಷ್ಟು ಕಪ್ಪು ಕಾಣಿಕೆಯನ್ನು ದೆಹಲಿ ಹೈಕಮಾಂಡಿಗೆ ಕೊಟ್ಟಿದ್ದ ಬಗ್ಗೆ ಚರ್ಚೆ ಮತ್ತು ಡೈರಿಯಲ್ಲಿ ಲಿಖಿತ ದಾಖಲೆಗಳನ್ನು ಸಾಬಿತು ಪಿಡಿಸಿದೆ. 2006-07ರಲ್ಲಿ ಸಿಕ್ಕ ಕೇವಲ 20 ತಿಂಗಳ ಅವಧಿಯಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರು ರಾಜ್ಯದ ಮುಖ್ಯಮಂತ್ರಿಯಾಗಿ ಉತ್ತಮ ಜನಪರ ಆಡಳಿತ ನೀಡಿದ್ದಾರೆ. ಇತರೇ ರಾಷ್ಟ್ರೀಯ ಪಕ್ಷಗಳ ಮುಖಂಡರು ಢೋಂಗಿಗಳಂತೆ ಓಟ್ಬ್ಯಂಕ್ ಬಗ್ಗೆ ಚಿಂತಿಸದೇ ನ್ಯಾಯಕ್ಕಾಗಿ ಏಕಾಂಗಿ ಹೋರಾಟ ಮಾಡಿ ದೇಶಕ್ಕೆ ಮಾದರಿಯ ಆಡಳಿತ ನೀಡಿ ಜನಮೆಚ್ಚಿದ ನಾಯಕ ಎನಿಸಿಕೊಂಡಿದ್ದಾರೆ ಎಂದು ವಿವರಿಸಿದ್ದಾರೆ.
Leave a Comment