ಕಾರವಾರ: ವಕ್ಟ್ ಕಚೇರಿಯನ್ನು ಶಿರಸಿಗೆ ವರ್ಗಾಯಿಸಿರುವದನ್ನು ವಕ್ಟ್ ಮಂಡಳಿ ಸದಸ್ಯರು ವಿರೋಧಿಸಿದ್ದಾರೆ.
ಈಚೆಗೆ ಮುಸ್ಲಿಂ ಸಮಾಜದವರು ನಡೆಸಿದ ಸಭೆಯಲ್ಲಿಯೂ ಈ ಬಗ್ಗೆ ಚರ್ಚೆ ನಡೆದಿದ್ದು, ಜಿಲ್ಲಾಕೇಂದ್ರ ಕಾರವಾರದಲ್ಲಿದ್ದ ಕಚೇರಿಯನ್ನು ಏಕಾಏಕಿ ಶಿರಸಿಗೆ ವರ್ಗಾಯಿಸಿರುವ ಬಗ್ಗೆ ಆಕ್ಷೇಪಗಳು ವ್ಯಕ್ತವಾದವು. ಕಚೇರಿ ವರ್ಗಾವಣೆ ವಿರೋಧಿಸಿ ಈಗಾಗಲೇ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವದೇ ಪ್ರಯೋಜನವಾಗಿಲ್ಲ ಎಂದು ವಕ್ಟ್ ಸದಸ್ಯರು ದೂರಿದರು. ಕಾರವಾರದಲ್ಲಿ ಪ್ರತ್ಯೇಕ ಕಚೇರಿ ಸ್ಥಾಪನೆಗೆ ಒತ್ತಾಯಿಸಿದರೂ ಅಧಿಕಾರಿಗಳು ಈವರೆಗೆ ಕಚೇರಿ ಸ್ಥಾಪಿಸಿಲ್ಲ. ಹೀಗಾಗಿ ಭವಿಷ್ಯದಲ್ಲಿ ಇದರ ವಿರುದ್ದ ಹೋರಾಟ ನಡೆಸಬೇಕಿದೆ ಎಂದು ಸದಸ್ಯರು ಅಭಿಪ್ರಾಯ ಹಂಚಿಕೊಂಡರು.
ಸಭೆಯಲ್ಲಿ ಅಕ್ರಮ ಖಾನ್, ಬಾಬು ಶೇಖ್, ನಜೀರ್ ಅಹ್ಮದ್, ಇಮ್ತಿಯಾಜ ಬುಖಾರಿ, ಶೇಖ ಅಲಿ ಜನಾಬ ಇತರರಿದ್ದರು.
Leave a Comment