ಕಾರವಾರ: ಸದಾಶಿವಗಡದ ಸದಿಚ್ಚಾ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಘದ ವತಿಯಿಂದ ಶುಕ್ರವಾರ ಲೋಕ ಶಾಂತಿಗಾಗಿ ಸತ್ಯನಾರಾಯಣ ಪೂಜೆ ನಡೆಸಲಾಯಿತು.
300ಕ್ಕೂ ಅಧಿಕ ದಂಪತಿಗಳು ಭಾಗವಹಿಸಿ ಪೂಜಾ ಕಾರ್ಯ ನೆರವೇರಿಸಿದರು. ನಂತರ ನಡೆದ ಸಭೆಯಲ್ಲಿ ಮಾಜಿ ಶಾಸಕ ಗಂಗಾಧರ ಭಟ್ಟ ಮಾತನಾಡಿ, ಸ್ವಸ್ಥ ಸಮಾಜ ನಿರ್ಮಾಣಕ್ಕೆ ಧರ್ಮಸ್ಥಳ ಸಂಘ ಶ್ರಮಿಸುತ್ತಿರುವದನ್ನು ಬಣ್ಣಿಸಿದರು. ವ್ಯಸನ ಮುಕ್ತ ಮಾನವನಿಂದ ಉತ್ತಮ ಪರಿಸರ ನಿರ್ಮಾಣ ಸಾದ್ಯವಿದೆ ಎಂದು ಅವರು ಅಭಿಪ್ರಾಯ ಪಟ್ಟರು. ಕಾರವಾರ-ಅಂಕೋಲಾ ಯೋಜನಾಧಿಕಾರಿ ಶೇಖರ ನಾಯ್ಕ ಮಾತನಾಡಿ, ಸ್ವ ಸಹಾಯ ಸಂಘಗಳ ಮೂಲಕ ಸ್ವಾವಲಂಬನೆ ಸಾಧಿಸಲು ಸಂಘ ದುಡಿಯುತ್ತಿದೆ. ಸಂಘದಿಂದ ಶಿಷ್ಯ ವೇತನ, ಮಾಸಾಶನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ವಿವಿಧ ಸಾಧಕರಿಗೆ ಗೌರವಿಸಲಾಯಿತು. ಕಾರವಾರ ಮೇಲ್ವಿಚಾರಕಿ ವೈಶಾಲಿ ನಿರ್ವಹಿಸಿದರು. ಒಕ್ಕೂಟದ ಅಧ್ಯಕ್ಷೆ ಅಂಕಿತಾ ರಾಣೆ, ನಿವೃತ್ತ ಮುಖ್ಯಾದ್ಯಾಪಕಿ ಉಷಾ ರಾಣೆ, ಶಿವಾಜಿ ಸಂಸ್ಥೆ ಪ್ರಾಆರ್ಯ ಪಿ.ಕೆ ಚಾಪಗಾಂವ್ಕರ್, ಪ್ರಮುಖರಾದ ಸವಿತಾ ದುರ್ಗೇಕರ್ ಇತರರಿದ್ದರು.
Leave a Comment