ಕಾರವಾರ: ಬಿಣಗಾದ ಸೀತಾ ನಗರದಲ್ಲಿ ಅಕ್ರಮವಾಗಿ ಮದ್ಯ ಹಾಗೂ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳ ವಿರುದ್ದ ಊರ ನಾಗರಿಕರು ಪೊಲೀಸ್ ಠಾಣೆಗೆ ದೂರು ನೀಡಿದರು.
ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಗೆ ಜಮಾಯಿಸಿದ ಜನ ಅಕ್ರಮ ಮಾರಾಟಗಾರರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಗೋವಾದಿಂದ ಅನಧಿಕೃತವಾಗಿ ತಂದ ಮದ್ಯವನ್ನು ಬಿಣಗಾದಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗಿದೆ ಎಂದು ಮಹಿಳೆಯರು ದೂರಿದರು. ಶಾಂತಿ ಕಣ್ಣನ್ ಹಾಗೂ ವಿಜಯಾ ಕಣ್ಣನ್ ಎಂಬಾತರು ಹಿಂದಿನಿಂದಲೂ ಗಾಂಜಾ ಮಾರಾಟ ಮಾಡುತ್ತಿದ್ದಾರೆ. ಅನಧಿಕೃತವಾಗಿ ಅಕ್ರಮ ಮದ್ಯ ದಾಸ್ತಾನು ಇರಿಸಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಪೊಲೀಸರು ಕ್ರಮ ಜರುಗಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಕ್ರಮ ಮದ್ಯ ಮಾರಾಟ ಮಾಡದಂತೆ ಎಚ್ಚರಿಸಿದರೂ ಆರೋಪಿತರು ಬುದ್ದಿ ಕಲಿತಿಲ್ಲ. ಅಕ್ರಮ ಮದ್ಯದ ಚಟಕ್ಕೆ ಚಿಕ್ಕ ಮಕ್ಕಳು ಬಲಿಯಾಗುತ್ತಿದ್ದಾರೆ ಎಂದು ವಿವರಿಸಿದರು.
ಶನಿವಾರ ರಾತ್ರಿ ವೆಂಕಟೇಶ್ ಲಮಾಣಿ ಎಂಬಾತರು ಹಣ ನೀಡಿಲ್ಲ ಎಂಬ ಕಾರಣ ನೀಡಿ ಅಕ್ರಮ ಮದ್ಯ ಮಾರಾಟಗಾರರು ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ಸ್ಥಳೀಯರಿಗೂ ಅವ್ಯಾಚ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ಊರ ಜನ ದುಡಿದ ಹಣವೆಲ್ಲ ಅಕ್ರಮ ಮದ್ಯ ಮಾರಾಟಗಾರರ ಪಾಲಾಗುತ್ತಿದ್ದು, ಕೂಡಲೇ ಕಾನೂನು ಬಾಹಿರವಾಗಿ ಮದ್ಯ ಮಾರಾಟ ಮಾಡುವವರ ವಿರುದ್ದ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಮಹಿಳೆಯರಾದ ಸೀತಾ ದೊಡ್ಮನಿ, ಶಿಲ್ಪಾ ಲಮಾಣಿ, ನಿರ್ಮಲಾ ಲಮಾಣಿ ಇತರರು ಪೊಲೀಸ್ ದೂರು ನೀಡಿದರು.
Leave a Comment