ಕಾರವಾರ: ದುಡಿಯುವ ಜನರ ಹಕ್ಕುಗಳ ಮೇಲೆ ದಬ್ಬಾಳಿಕೆ ನಡೆಯುವದನ್ನು ಖಂಡಿಸಿ ಜನ ಏಕತಾ ಜನ ಅಧಿಕಾರ ಆಂದೋಲನದವರು ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಪ್ರಮುಖ 26 ಅಂಶಗಳ ಬೇಡಿಕೆಯನ್ನು ಈಡೇರಿಸುವಂತೆ ಮನವಿಯಲ್ಲಿ ಆಗ್ರಹಿಸಿರುವ ಆಂದೋಲನದವರು, ಜನರ ಐಕ್ಯತೆಯ ಮೇಲೆ ನಡೆಯುವ ದಾಳಿಯನ್ನು ಖಂಡಿಸಿದರು. ಸಾರ್ವಜನಿಕ ವಿತರಣೆ ವ್ಯವಸ್ಥೆಯನ್ನು ಬಲಪಡಿಸಬೇಕು. ಸರಕುಗಳ ಬೆಲೆಯಲ್ಲಿ ಜೂಜಾಟ ತಪ್ಪಿಸಿ ಬೆಲೆ ಏರಿಕೆ ತಡೆಯಬೇಕು ಎಂದು ಆಗ್ರಹಿಸಿದರು. ನನಿರುದ್ಯೋಗ ತಡೆಗೆ ಸರ್ಕಾರಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು. ಎಲ್ಲಾ ನೌಕರರಿಗೂ ಮಾಸಿಕ ಕನಿಷ್ಟ 18 ಸಾವಿರ ವೇತನ ನೀಡಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ಪದ್ದತಿಯನ್ನು ಜಾರಿಗೆ ತರಬೇಕು ಎಂಬುದನ್ನು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಕೆಗಾಗಿ ಹಕ್ಕೋತ್ತಾಯ ಮಾಡಿದರು. ಸಂಘಟನೆ ಪ್ರಮುಖರಾದ ಯಮೂನಾ ಗಾಂವ್ಕರ್, ರಾಮಾ ನಾಯ್ಕ, ದೀಪಕ ಕುಡಾಳಕರ್, ಎಲಿಷಾ ಎಲಕಪಾಟಿ ಇತರರಿದ್ದರು.
Leave a Comment