Àಕಾರವಾರ: ಪುರಾಣ ಪ್ರಸಿದ್ಧ ಶ್ರೀ ವಿಠಲ್ ರುಖುಮಾಯಿ ದೇವರ ವಾರ್ಷಿಕ ಜಾತ್ರಾ ಮಹೋತ್ಸವ ನ.2ರಂದು ನಡೆಯಲಿದೆ.
ಈ ದೇವಸ್ಥಾನವು ಸುಮಾರು ನಾಲ್ಕು ಶತಮಾನಕ್ಕೂ ಹೆಚ್ಚು ಹಳೆಯದಾಗಿದ್ದು ಮಹಾರಾಷ್ಟ್ರದ ಪಂಡರಪುರದ ವಿಶೇಷತೆ ಹೊಂದಿದೆ. ಕಾರ್ತಿಕ ಮಾಸದ ಸಂದರ್ಭದಲ್ಲಿ ವಿಶೇಷ ಜಾತ್ರೆ ನೆರವೇರುತ್ತವೆ.
ಕಳೆದ ಎರಡು ವರ್ಷಗಳಿಂದ ಈ ಉತ್ಸವಕ್ಕೆ ಭಜನೆ ಹಾಗೂ ದಿಂಡಿ ಉತ್ಸವ ಎಂದು ಪ್ರಶದ್ಧಿ ಪಡೆದಿದ್ದು ಜಾತ್ರೋತ್ಸವದ ಒಂದು ವಾರದ ಪೂರ್ವದಲ್ಲಿ ಗೋವಾದ ಪ್ರಸಿದ್ಧ ಸಂಗೀತಕಾರ ಬಾಬು ರಾಜಾರಾಮ್ ಗಡೇಕರ್ ಅವರ ನೇತೃತ್ವದಲ್ಲಿ ಇತರ ಕಲಾಕಾರ ಹಾಗೂ ಸ್ಥಳೀಯ ಭಜಕರೊಂದಿಗೆ ನಗರದೆಲ್ಲೆಡೆ ದಿಂಡಿ ಸಂಚರಿಸುತ್ತದೆ. ಜಾತ್ರೋತ್ಸವದ ಅಂಗವಾಗಿ ನ.2ರಂದು ಬೆಳಗ್ಗೆ ಪಂಚಾಮೃತ ಅಭಿಷೇಕ, ಮಧ್ಯಾಹ್ನ 5ಕ್ಕೆ ಪಲ್ಲಕ್ಕಿ ಮೆರವಣಿಗೆ ಬಳಿಕ ಭಜನಾ ಕಾರ್ಯಕ್ರಮ ನಡೆಯಲಿದೆ.
ಈ ಪ್ರಸಿದ್ಧ ದೇವಾಲಯದ ದಿಂಡಿ ಉತ್ಸವಕ್ಕೆ ಸ್ಥಳೀಯರಾದ ಹಾಗೂ ಕೋಸ್ಟ್ಗಾರ್ಡ್ನಲ್ಲಿ ಉನ್ನತಾಧಿಕಾರಿ ಗೋವಾದಲ್ಲಿ ಸೇವೆ ಸಲ್ಲಿಸುತ್ತಿರುವ ಮನೋಜ ಬಾಡಕರ ಕಳೆದ ಅನೇಕ ವರ್ಷದಿಂದ ನಗರದ ಶ್ರೀ ವಿಠಲ್ ರುಖುಮಾಯಿ ಜಾತ್ರೋತ್ಸವದಲ್ಲಿ ಅತೀ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದು ಯುವ ಪೀಳಿಗೆ ಇಂಥ ಧಾರ್ಮಿಕ ಕೈಂಕರ್ಯಕ್ಕೆ ಪಾಲ್ಗೊಳ್ಳಬೇಕು ಎಂದು ಅವರು ಕರೆ ನೀಡಿದ್ದಾರೆ.
Leave a Comment