ಕಾರವಾರ: ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದ ರಾಷ್ಟೀಯ ಸೇವಾ ಯೋಜನೆ ಅಡಿಯಲ್ಲಿ ಸರ್ದಾರ ವಲ್ಲಭಬಾಯಿ ಪಟೇಲ್ರ 142 ನೇ ಜನ್ಮ ದಿನವಾದ ರಾಷ್ಟ್ರೀಯ ಎಕತಾ ದಿನಾಚರಣೆಯನ್ನು ಆಚರಿಸಲಾಯಿತು.
ಕ.ವಿ.ವಿ. ಧಾರವಾಡ ಸದಸ್ಯ ಡಾ. ಶಿವಾನಂದ ನಾಯಕ ಮಾತನಾಡಿ, ಸರ್ದಾರ ವಲ್ಲಭಬಾಯಿ ಪಟೇಲ್ರ ಜನ್ಮದಿನವನ್ನು ರಾಷ್ಟ್ರೀಯ ಎಕತಾ ದಿನ ಎಂದು ಆಚರಿಸುವುದು ಅರ್ಥಪೂರ್ಣವಾಗಿದೆ. ಪಟೇಲರ ವಿಚಾರ ಸದೃಡ ನಿರ್ದಾರ ಮತ್ತು ಪ್ರಮಾಣಿಕತೆ ವಿದ್ಯಾರ್ಥಿಗಳು ಬೆಳಸಿಕೊಂಡಲ್ಲಿ ಸದೃಡವಾದ ಬಲಿಷ್ಠ ಭಾರತ ನಿರ್ಮಾಣವಾಗುವುದು ಎಂದು ಹೇಳಿದರು. ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳಾದ ಕುಮಾರ. ಅನಂತ ನಾಯಕ, ಮತ್ತು ಕುಮಾರಿ. ಹರ್ಷಿತಾ ಆರ್. ಪಟೇಲರ ಬಾಲ್ಯ ಜೀವನ ಮತ್ತು ರಾಷ್ಟ್ರ ಪ್ರೇಮದ ಬಗ್ಗೆ ಮಾತನಾಡಿದರು. ಉಪನ್ಯಾಸಕರಾದ ಡಾ. ಶಿವಕುಮಾರ ಹರಗಿ, ಡಾ. ಸುರೇಶ ಅರಕೆರಾ, ಕಿರಣಕುಮಾರ ಬಿ. ವಹೀದಾ ಖಾನ್, ಅನು ನಾಯರ್ ಇದ್ದರು.
ಕ.ವಿ.ವಿ. ಸ್ನಾತಕೋತ್ತರ ಕೇಂದ್ರದ ಆಡಳಿತಾಧಿಕಾರಿ ಡಾ. ಜೆ.ಎಲ್. ರಾಠೋಡ ಅಧ್ಯಕ್ಷತೆ ವಹಿಸಿದ್ದರು. ಡಾ. ಹನುಮಂತ ಮುಸ್ತಾರಿ ಪ್ರಸ್ತಾಪಿಸಿದರು. ಕುಮಾರ ಆದಿತ್ಯ ಒಡೆಯರ್ ಹಾಗೂ ಕುಮಾರಿ ಆಯಿಶಾ ಬೆಗಂ ನಿರ್ವಹಿಸಿದರು. ರಶ್ಮೀ ಅಲ್ಕೆ ವಂದಿಸಿದರು.
Leave a Comment