ಹಳಿಯಾಳ :
ಹಳಿಯಾಳ ಪಟ್ಟಣ ಹಾಗೂ ಗ್ರಾಮಾಂತರ ಭಾಗದಲ್ಲಿ 62ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ-ಸಡಗರದಿಂದ ಆಚರಿಸಲಾಯಿತು.
ಹಳಿಯಾಳ ತಾಲೂಕಾ ಜಯ ಕರ್ನಾಟಕ ಸಂಘಟನೆ ಹಾಗೂ ವೀರಶೈವ ಮಹಾಸಭಾ ಸಂಘಟನೆಂiÀವರು ಜಂಟಿಯಾಗಿ ನಿರ್ಮಿಸಿದ 190 ಅಡಿ(62 ಮೀಟರ್) ಉದ್ದದ ಬೃಹತ್ ಕನ್ನಡ ಬಾವುಟದ ಪ್ರದರ್ಶನ ಹಾಗೂ ಮೇರವಣಿಗೆ ರಾಜ್ಯೋತ್ಸವಕ್ಕೆ ಮೇರಗು ನೀಡಿತು.
ಪಟ್ಟಣದ ಯಲ್ಲಾಪೂರ ನಾಕಾದಲ್ಲಿರುವ ಡಾ. ಬಾಬಾಸಾಹೇಬ ಅಂಬೇಡ್ಕರ ಪುತ್ಥಳಿ, ಅರ್ಬನ್ ವೃತ್ತದಲ್ಲಿರುವ ಸಂಗೋಳ್ಳಿ ರಾಯಣ್ಣ ಪುಥ್ಥಳಿ, ಶಿವಾಜಿ ವೃತ್ತದಲ್ಲಿರುವ ಶ್ರೀ ಛತ್ರಪತಿ ಶಿವಾಜಿ ಪ್ರತಿಮೆ, ಬಸವೇಶ್ವರ ಪುಥ್ಥಳಿ ಮತ್ತು ಕನ್ನಡಾಂಭೆದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಜಯ ಕರ್ನಾಟಕ ಸಂಘಟನೆಯವರು ರಾಜ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಿದರು.
ಬೆಳಿಗ್ಗೆ ಪಟ್ಟಣದ ಮಿನಿವಿಧಾನಸೌಧದ ಆವರಣದಲ್ಲಿ ತಾಲೂಕಾ ದಂಡಾಧಿಕಾರಿ ವಿದ್ಯಾಧರ ಗುಳಗಳಿ ಧ್ವಜಾರೋಹಣ ನೆರವೆರಿಸಿ ಮಾತನಾಡಿ ನಾಡು ನುಡಿ, ರಾಷ್ಟ್ರದ ಬಗ್ಗೆ ಎಲ್ಲರು ಅಭಿಮಾನ ಹೊಂದಿರಬೇಕು ನೆಲ,ಜಲ ರಕ್ಷಣೆ ಹಾಗೂ ಅಭಿವೃದ್ದಿಗೆ ಎಲ್ಲರೂ ಕೈಜೋಡಿಸಿ ಶ್ರಮಿಸಬೇಕೆಂದು ಕರೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೆಕರ ಹಾಗೂ ಪುರಸಭೇ ಅಧ್ಯಕ್ಷ ಉಮೇಶ ಬೋಳಶೆಟ್ಟಿ ಕನ್ನಡಾಂಬೆ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೇರವಣಿಗೆಗೆ ಚಾಲನೆ ನೀಡಿದರು.
ಕಾರ್ಯಕ್ರಮದ ಬಳಿಕ ಪಥ ಸಂಚಲನ, ಪ್ರಭಾತ ಪೇರಿ ಹಾಗೂ 61ಮೀ. ಉದ್ದದ ಕನ್ನಡ ಬಾವುಟದ ಮೇರವಣಿಗೆಯು ವಿವಿಧ ರೂಪಕಗಳೊಂದಿಗೆ ಹಾಗೂ ಜಗ್ಗಲಗಿ ವಾದ್ಯವೃಂದದೊಂದಿಗೆ ಸಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಾಯಣ್ಣನಿಗೆ ಮಾಲಾರ್ಪಣೆ ಮಾಡಿ ಮೆರವಣಿಗೆಯು ಸಮಾರೂಪಗೊಂಡಿತು.
ಸಮಾರಂಭದಲ್ಲಿ ಜಯ ಕರ್ನಾಟಕ ಸಂಘಟನೆಯ ವಿಲಾಸ ಕಣಗಲಿ, ಶಿರಾಜ ಮುನವಳ್ಳಿ, ವೀರಶೈವ ಯುವ ಘಟಕದ ಅಪ್ಪು ಚರಂತಿಮಠ, ಬಸವರಾಜ ಬೆಂಡಿಗೇರಿಮಠ, ವೀರಭದ್ರ ಚಕ್ರಸಾಲಿ, ಜೀಜಾಮಾತಾ ಸಂಘಟನೆಯ ಮಂಗಲಾ ಕಶೀಲಕರ , ಪುರಸಭೆ ಸದಸ್ಯರು, ಅಧಿಕಾರಿ ವರ್ಗದವರು ಮೊದಲಾದವರು ಇದ್ದರು.
Leave a Comment