ಕಾರವಾರ: ಕರ್ನಾಟಕ ಗೋವಾ ಗಡಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುವ ಮೂಲಕ ಕರುನಾಡ ರಕ್ಷಣಾ ವೇದಿಕೆಯವರು ಗಮನ ಸೆಳೆದರು.
ಕಾರವಾರದ ಸದಾಶಿವಗಡ ಪ್ರದೇಶ ಗೋವಾ ಗಡಿಯಾಗಿದ್ದು, ಇಲ್ಲಿನ ಹಲವು ಸಮಸ್ಯೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸಬೇಕಿದೆ ಎಂದು ವೇದಿಕೆ ಅಧ್ಯಕ್ಷ ಎನ್. ದತ್ತಾ ಶಾಸಕ ಸತೀಶ್ ಸೈಲ್ ಬಳಿ ಮನವಿ ಮಾಡಿದರು. ಗಡಿಭಾಗದ ಅಭಿವೃದ್ದಿಗೆ ಗಮನ ಹರಿಸುವದಾಗಿ ಶಾಸಕರು ಭರವಸೆ ನೀಡಿದರು. ಸ್ಥಳೀಯ ಗ್ರಾಮ ಪಂಚಾಯತ ಸದಸ್ಯ ಸುರಜ ದೇಸಾಯಿ, ಸದಾಶಿವಗಡ ಶಾಲಾ ಮುಖ್ಯೋದ್ಯಾಪಕಿ ಬೇಬಿ ಆಸಿಯಾ ಖಾನ ಹಾಗೂ ವೇದಿಕೆ ಪದಾಧಿಕಾರಿಗಳು ಇದ್ದರು.
Leave a Comment