ಕಾರವಾರ: ಇಲ್ಲಿನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಉದಯೋನ್ಮುಖ ಅತ್ಯುತ್ತಮ ಐ.ಎಂ.ಎ ಶಾಖೆ ಪ್ರಶಸ್ತಿ ಲಭಿಸಿದೆ.
ವೈದ್ಯಕೀಯ ಶಿಕ್ಷಣದ ಚಟುವಟಿಕೆ, ಸಾರ್ವಜನಿಕ ಸೇವೆಗಳು ಹಾಗೂ ಸಾಂಸ್ಕøತಿಕ ಚಟುವಟಿಕೆಗಳ ಮೌಲ್ಯಮಾಪನದ ಆಧಾರದ ಮೇಲೆ ರಾಜ್ಯ ವೈದ್ಯಕೀಯ ವಿಜ್ಞಾನ ಸಂಘವೂ ಈ ಪ್ರಶಸ್ತಿ ನೀಡುತ್ತದೆ. ನಗರದಲ್ಲಿ ಹೊಸದಾಗಿ ಸ್ಥಾಪಿತಗೊಂಡ ಐ.ಎಂ.ಎ ಕೇಂದ್ರವನ್ನು ಉದ್ಘಾಟಿಸಲು ಆಗಮಿಸಿದ್ದ ಡಾ. ರಾಜಶೇಖರ್ ಬಳ್ಳಾರಿ ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಪ್ರಶಸ್ತಿ ನೀಡಲು ಶಿಪಾರಸ್ಸು ಮಾಡಿದ್ದರು. ಈಚೆಗೆ ಗದಗದಲ್ಲಿ ನಡೆದ ರಾಜ್ಯ ಮಟ್ಟದ ಸಮಾವೇಶದಲ್ಲಿ ಶಾಖೆಯ ಪರವಾಗಿ ಡಾ. ಸುರೇಶ ಭಟ್ ಪ್ರಶಸ್ತಿ ಸ್ವೀಕರಿಸಿದರು.
Leave a Comment