ಹಳಿಯಾಳ: ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಅಲ್ಲದೇ ಉಚಿತ ಪಠ್ಯ ಪುಸ್ತಕ, ಬಿಸಿ ಊಟ, ಸೈಕಲ್ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿದ್ದು ಅವುಗಳ ಸದುಪಯೋಗ ಪಡೆಯಲು ಪಾಲಕರು ಮಕ್ಕಳಿಗೆ ಅರಿವು ಮೂಡಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಕರೆ ನೀಡಿದರು.
ಪಟ್ಟಣದ ಬಸವನಗಲ್ಲಿ ಹಾಗೂ ಗಾಂಧಿಕೇರಿಗಲ್ಲಿಯಲ್ಲಿ ನೂತನ ಅಂಗನವಾಡಿ ಕಟ್ಟಡದ ಉದ್ಘಾಟನೆಯನ್ನ ನೇರವೆರಿಸಿ ಮಾತನಾಡಿದರು. ತಾಯಂದಿರು ಮಕ್ಕಳ ಬೆಳವಣಿಗೆ ಬಗ್ಗೆ ಎಚ್ಚರಕ್ಕೆ ವಹಿಸಿ ಒಳ್ಳೆಯ ಮಾರ್ಗದರ್ಶನ ಸ್ವಚ್ಛತೆ ಬಗ್ಗೆ ತಿಳುವಳಿಕೆ ನೀಡಬೇಕು. ಮಕ್ಕಳು ರಾಷ್ಟ್ರದ ಭವಿಷ್ಯ ಸರ್ಕಾರ ಶಿಕ್ಷಣಕ್ಕಾಗಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು ಅವುಗಳ ಸದುಪಯೋಗ ಪಡೆಯಬೇಕೆಂದು ಸಚಿವರು ಕರೆ ನೀಡಿದರು.
ಪುರಸಭೆ ಅಧ್ಯಕ್ಷ ಉಮೇಶ ಬೊಳಶೆಟ್ಟಿ, ಜಿ.ಪಂ ಉಪಾಧ್ಯಕ್ಷಕ ಸಂತೋಷ ರೇಣಕೆ, ಸದಸ್ಯರಾದ ಕೃಷ್ಣಾ ಪಾಟೀಲ, ಲಕ್ಷ್ಮೀ ಕೊರ್ವೆಕರ, ಬ್ಲಾಕ ಕಾಂಗ್ರೇಸ ಅಧ್ಯಕ್ಷ ಸುಭಾಸ ಕೊರ್ವೆಕರ, ತಾ.ಪಂ ಅಧ್ಯಕ್ಷ ರೀಟಾ ಸಿದ್ದಿ, ಉಪಾಧ್ಯಕ್ಷೆ ನೀಲವ್ವಾ ಮಡಿವಾಳ, ಪುರಸಭೆ ಉಪಾಧ್ಯಕ್ಷ ಅರುಣ ಬೋಬಾಟಿ, ಸದಸ್ಯರಾದ ಗಾಯತ್ರಿ ನೀಲಜಕರ, ಶಂಕರ ಬೆಳಗಾಂವಕರ, ಸತ್ಯಜಿತ ಗಿರಿ, ಮಾಲಾ ಬ್ರಗಾಂಜಾ ಪರಶುರಾಮ ಹರ್ಲಿ, ತಹಶೀಲ್ದಾರ ವಿದ್ಯಾಧರ ಗುಳಗುಳಿ, ತಾ.ಪಂ ಅಧಿಕಾರಿ ಲಕ್ಷ್ಮಣರಾವ ಯಕ್ಕುಂಡಿ, ಬಿ.ಇ.ಓ ಸಮೀರ ಮುಲ್ಲಾ, ಪಿಡಬ್ಯೂಡಿ ಎಇಇ ಆರ್ ಎಚ್ ಕುಲಕರ್ಣಿ, ಹೆಸ್ಕಾಂ ಎಇಇ ರವಿಂದ್ರ ಮೆಟಗುಡ್ ಇನ್ನಿತರರು ಇದ್ದರು.
ಸಿ.ಡಿ.ಪಿ.ಓ ಶಾರದಾಬಾಯಿ ಮರಾಠೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೇಲ್ವಿಚಾರಕಿ ಸುವರ್ಣಾ ಗುರವ, ನಿರೂಪಿಸಿದರು. ನಿರ್ಮಿತಿ ಕೇಂದ್ರದ ಇಂಜೀನಿಯರ್ ಗಂಗಾಧರ ಕುಂಬಾರ ವಂದಿಸಿದರು.
Leave a Comment