ಹಳಿಯಾಳ:-
ಲಕ್ಷಾಂತರ ಹಿಂದೂ, ಕ್ರೈಸ್ತರ ಹತ್ಯೆ ನಡೆಸಿದ್ದು ಮತ್ತು ಬಲವಂತವಾಗಿ ಮತಾಂತರ ಮಾಡಿರುವ ಟಿಪ್ಪು ಸುಲ್ತಾನನ ಜಯಂತಿಯನ್ನು ಸರ್ಕಾರ ಕೂಡಲೇ ರದ್ದುಗೊಳಿಸಬೇಕೆಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮೀತಿ ಸಂಘಟನೆಯ ನೇತೃತ್ವದಲ್ಲಿ ವಿವಿಧ ಹಿಂದುಪರ ಸಂಘಟನೆಗಳು ರಾಜ್ಯಪಾಲರಿಗೆ ಬರೆದ ಮನವಿಯನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಿದರು.
ಮನವಿಯಲ್ಲಿ ಟಿಪ್ಪುವಿಗೆ ಅಧಿಕಾರ ಸಿಕ್ಕಿದ ಕೂಡಲೇ ರಾಜ್ಯದ ಅನೇಕ ಊರುಗಳ ಹಿಂದೂ ಹೆಸರುಗಳನ್ನು ಅಳಿಸಿ, ಇಸ್ಲಾಮಿ ಹೆಸರನ್ನು ಬಲವಂತವಾಗಿ ಮರುನಾಮಕರಣ ಮಾಡಿದ್ದಾನೆ, ತನ್ನ ರಾಜ್ಯದಲ್ಲಿನ ಎಲ್ಲಾ ಹಿಂದೂಗಳನ್ನು ಮುಸಲ್ಮಾನವನ್ನಾಗಲು ಆದೇಶವನ್ನು ಕೊಟ್ಟಿದ್ದ ಮೈಸೂರಿನಲ್ಲಿಯ ಎಲ್ಲಾ ಹಳ್ಳಿಯ ಮುಸಲ್ಮಾನ ಅಧಿಕಾರಿಗಳಿಗೆ ಆದೇಶವನ್ನು ಲಿಖಿತ ಸ್ವರೂಪದಲ್ಲಿ ಕಳುಹಿಸಿ “ಎಲ್ಲಾ ಹಿಂದೂ ಮಹಿಳೆಯರನ್ನು ಮತ್ತು ಪುರುಷರನ್ನು ಮುಸಲ್ಮಾನ ಧರ್ಮದ ದೀಕ್ಷೆಯನ್ನು ನೀಡಿ, ಯಾರು ಸ್ವ ಇಚ್ಛೆಯಿಂದ ಮುಸಲ್ಮಾನ ಧರ್ಮವನ್ನು ಸ್ವೀಕರಿಸುವುದಿಲ್ಲವೋ, ಅವರನ್ನು ಬಲವಂತವಾಗಿ ಮುಸಲ್ಮಾನವನ್ನಾಗಿಸಿ ಅಥವಾ ಹತ್ಯೆ ಮಾಡಿ. ಹಿಂದೂ ಸ್ತ್ರೀಯರನ್ನು ಎಳೆದು ತನ್ನಿ ಮತ್ತು ಮುಸಲ್ಮಾನರಲ್ಲಿ ಹಂಚಿರಿ ಎಂದಿದ್ದ ಕ್ರೂರ ಟಿಪ್ಪು ಜಯಂತಿ ಆಚರಣೆ ಕೂಡಲೇ ಸರ್ಕಾರ ರದ್ದುಗೊಳಿಸಬೇಕೆಂದು ಆಗ್ರಹಿಸಲಾಗಿದೆ.
ಪ್ರತಿಭಟನೆ ನಡೆಸಿ ಮನವಿ ಸಲ್ಲಿಸುವಾಗ ಹಿಂದೂ ಜನಜೃಗತಿ ಸಮಿತಿಯ ವಿಠೋಬಾ ಮಾಳಸೇಕರ, ಅಪ್ಪಾಜಿ ಶಹಾಪೂರಕರ, ಕಾಶಿನಾಥ ಗುರವ, ವಿನೋದ ಗಿಂಡೆ, ಅರುಣ ಗೊಂಧಳಿ, ನಿಢೀನ ಡಾಂಗೆ, ಧರ್ಮರಾಜ ಪಾಟೀಲ, ಶಂಕರ ರೇಣಕೆ, ನಾರಾಯಣ ಪಾಠಣಕರ ಇತರರು ಇದ್ದರು.
Leave a Comment