• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸರಕಾರದ ಕಾರ್ಯಕ್ರಮಗಳು ಕಟ್ಟಕಡೆಯ ಜನರಿಗೂ ಸಿಗುವಂತೆ ಕಾಂಗೇಸ್ ಕಾರ್ಯಕರ್ತರು ಶ್ರಮಿಸಬೇಕು;ಆರಾಧ್ಯ ವಿ.ಎಸ್.

November 6, 2017 by Gaju Gokarna Leave a Comment

ಹೊನ್ನಾವರ , ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರದ ಅನೇಕ ಜನಪರ ಕಾರ್ಯಕ್ರಮಗಳು ಸಮಾಜದ ಎಲ್ಲಾ ವರ್ಗದ ಜನರಿಗೂ ತಲುಪಿದ್ದು, ಸರಕಾರದ ಕಾರ್ಯಕ್ರಮಗಳು ಕಟ್ಟಕಡೆಯ ಜನರಿಗೂ ಸಿಗುವಂತೆ ಕಾಂಗೇಸ್ ಕಾರ್ಯಕರ್ತರು ಶ್ರಮಿಸಬೇಕೆಂದು ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಆರಾಧ್ಯ ವಿ.ಎಸ್. ಹೇಳಿದರು.
ಅವರು ಹೆರಂಗಡಿ ಪಂಚಾಯತ್ ಕಾಂಗ್ರೇಸ್ ಘಟಕ ಮತ್ತು ಮಂಕಿ ಬ್ಲಾಕ್ ಕಾಂಗ್ರೇಸ್ ಸಮಿತಿಯ ಆಶ್ರಯದಲ್ಲಿ ಅಳ್ಳಂಕಿಯಲ್ಲಿ ನಡೆದ ಕಾಂಗ್ರೇಸ್ ಕಾರ್ಯಕರ್ತರ ಸಮಾವೇಶ ಮತ್ತು ಮನೆ ಮನೆಗೆ ಕಾಂಗ್ರೇಸ್ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದÀ್ದರು. ಅವರು ಮುಂದುವರಿದು ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಿದೆ. ಮತ್ತು ರಾಜ್ಯದ ಎಲ್ಲಾ ರೈತರ 50 ಸಾವಿರವರೆಗಿನ ರೈತರ ಸಾಲ ಮನ್ನಾ ಮಾಡಿ ವಿಶೇಷ ಸಾಧನೆ ಮಾಡಿದೆ. ಜನತೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಪುನಃ ಆಶೀರ್ವಾದ ಮಾಡುವರೆಂಬ ವಿಶ್ವಾಸವನ್ನು ಅವರು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು.
ಡಿ.ಸಿ.ಸಿ. ಸದಸ್ಯ ಚಂದ್ರಕಾಂತ ಕೊಚರೇಕರ್ ಮಾತನಾಡಿ ಭೂತ್‍ಗಳ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯ ಶಾಸಕ ಮಂಕಾಳು ವೈದ್ಯರ ವಿಶೇಷ ಪ್ರಯತ್ನದಿಂದ ಹಿಂದೆಂದೂ ಆಗದ ಅನೇಕ ಅಭಿವೃದ್ದಿ ಕಾಮಗಾರಿಗಳನ್ನು ಈ ಬಾರಿ ರಾಜ್ಯದ ಕಾಂಗ್ರೇಸ್ ಸರ್ಕಾರ ಮಂಜೂರಿ ಮಾಡಿದೆ. ನೂರಾರು ಕೋಟಿ ವೆಚ್ಚದ ಹಲವು ಸೇತುವೆ ಕಾಮಗಾರಿಗಳು ಈ ಕ್ಷೇತ್ರದಲ್ಲಿ ಅನುಷ್ಟಾನಗೊಳ್ಳುತ್ತಿವೆ. ಅತ್ಯಂತ ಕುಗ್ರಾಮಗಳಾದ ತುಂಬೊಳ್ಳಿ, ಮಹಿಮೆ, ಮೆಟ್ಟಿನಗದ್ದೆ ಅನೇಕ ಗ್ರಾಮಗಳಿಗೆ ಪಕ್ಕಾ ರಸ್ತೆಗಳ ಸೌಲಭ್ಯವನ್ನು ಕಲ್ಪಸಲಾಗಿದೆ. ಈ ಕುಗ್ರಾಮಗಳಿಗೆ ವಿದ್ಯತ್ ಸೌಲಭ್ಯ ಒದಗಿಸಲಾಗಿದೆ. ಹೈಗುಂದ ಸಹಿತ ಹಲವಾರು ದ್ವೀಪ ಪ್ರದೇಶಗಳಿಗೆ ಇದೇ ಮೊದಲ ಬಾರಿಗೆ ಸೇತುವೆ ಸೌಲಭ್ಯ ಕಲ್ಪಿಸಲಾಗಿದೆ. ಹೆರಂಗಡಿ-ಕುರ್ವೆ ದ್ವೀಪ ಸಹಿತ ಇನ್ನು ಅನೇಕ ಭಾಗಗಳಿಗೆ ರಸ್ತೆ ಸಹಿತ ಸೇತುವೆ ಕಾಮಗಾರಿಗಳನ್ನು ಕೈಗೊಳ್ಳಲು ಶಾಸಕರು ಸರ್ಕಾರದಿಂದ ನೂರಾರು ಕೋಟಿ ಅನುದಾನವನ್ನು ಬಿಡುಗಡೆಗೊಳಿಸಲು ಶಕ್ತಿಮೀರಿ ಶ್ರಮಿಸಿದೆ. ಅನ್ನಭಾಗ್ಯ ಸಹಿತ ಸರಕಾರದ ಜನಪರ ಯೋಜನೆಗಳಿಂದಾಗಿ ಜನರನ್ನು ಸೋಮಾರಿಗಳನ್ನಾಗಿ ಮಾಡಲಾಗುತ್ತಿದೆ ಎಂಬ ಪ್ರತಿಪಕ್ಷಗಳವರ ಟೀಕೆಗಳಿಗೆ ಜನರೇ ಮುಂದಿನ ದಿನಗಳಲ್ಲಿ ಉತ್ತರಿಸುತ್ತಾರೆ ಎಂದು ಅವರು ಈ ಸಂದರ್ಭದಲ್ಲಿ ಮಾರ್ಮಿವಾಗಿ ತಿರುಗೇಟು ನೀಡಿದರು.
ಕೆ.ಪಿ.ಸಿ.ಸಿ. ಕಾರ್ಯದರ್ಶಿ ಡಾ|| ರಾಜನಂದಿನಿ ಕಾಗೋಡು ತಿಮ್ಮಪ್ಪ ಮಾತನಾಡಿ ಕಾಂಗ್ರೇಸ್ ಕಾರ್ಯಕರ್ತರು ಹೆಚ್ಚು ಹೆಚ್ಚು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಕಾಂಗ್ರೇಸ್ ಪಕ್ಷವನ್ನು ಇನ್ನಷ್ಟು ಬಲಪಡಿಸಲು ಎಲ್ಲರೂ ಪ್ರಯತ್ನಿಸಬೇಕೆಂದು ಕೋರಿದೆ. ಈ ಭಾಗದ ಅರಣ್ಯ ಅತೀಕ್ರಮಣದಾರರ ಸಮಸ್ಯೆಗೆ ಕಾಂಗ್ರೇಸ್ ಪಕ್ಷ ಸ್ಪಂದಿಸಿದೆ. ಅರಣ್ಯ ಹಕ್ಕು ನಿಯಮದಡಿ ತಾತ್ಕಾಲಿಕ ರಕ್ಷಣೆ ನಿಡಲಾಗಿದೆ. ಕಾಂಗ್ರೇಸ್ ಮುಖಂಡ ಚಂದ್ರಕಾಂತ ಕೊಚರೇಕರ್ ಸಲ್ಲಿಸಿದ ಅನೇಕ ಮಹತ್ವದ ವಿಚಾರಗಳುಳ್ಳ ಮನವಿಯನ್ನು ತಮ್ಮ ತಂದೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪನವರ ಮೂಲಕ ಸರ್ಕಾರದ ಗಮನಸೆಳೆಯುವ ಪ್ರಯತ್ನಮಾಡುತ್ತಿದ್ದೇನೆ. ಅರಣ್ಯ ಭೂಮಿ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿರುವುದರಿಂದ 1980ರ ನಂತರದ ಅರಣ್ಯ ಅತೀಕ್ರಮಣ ಮಂಜೂರಿಗೆ ಕೆಲವು ಸಮಸ್ಯೆಗಳಿವೆ. ಆದರೂ ರೈತರು ಭಯಪಡುವುದು ಬೇಡಎಂದರು,
ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಚಂದ್ರಶೇಖರ ಗೌಡ, ಜಿ.ಪಂ. ಸದಸ್ಯೆ ಪುಷ್ಪಾ ನಾಯ್ಕ, ತಾ.ಪಂ. ಸದಸ್ಯ ಲೋಕೇಶ ನಾಯ್ಕ ಮುಂತಾದವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು, ಕಾರ್ಯಕ್ರಮದಲ್ಲಿ ಸ್ಥಳೀಯ ಜಿ.ಪಂ. ಸದಸ್ಯೆ ಸವಿತಾ ಗೌಡ, ಮಾಜಿ ಜಿ.ಪಂ. ಸದಸ್ಯ ಕೃಷ್ಣ ಗೌಡ, ಡಿ.ಸಿ.ಸಿ. ಸದಸ್ಯರುಗಳಾದ ವಾಮನ ನಾಯ್ಕ, ಯೋಗೇಶ ರಾಯ್ಕರ್,ನಾಮದೇವ ಅಂಕೋಲೇಕರ್ ಗ್ರಾಮ ಪಂಚಾಯತ್ ಅಧ್ಯಕ್ಷ ಈಶ್ವರ ಎನ್. ನಾಯ್ಕ ಕುದ್ರಿಗಿ, ಸುರೇಶ ನಾಯ್ಕ ತುಂಬೊಳ್ಳಿ, ಸ್ಥಳೀಯ ಘಟಕದ ರಾಮಕೃಷ್ಣ ಹೆಗಡೆ, ರವಿ ಫರ್ನಾಂಡಿಸ್, ಅಲ್ಲಾವುದ್ದೀನ್ ಕುರ್ವೆ, ಮುಂತಾದ ಪ್ರಮುಖರು ಉಪಸ್ಥಿತರಿದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Honavar News Tagged With: ಆರಾಧ್ಯ ವಿ.ಎಸ್., ಕಟ್ಟಕಡೆಯ, ಕಾಂಗೇಸ್ ಕಾರ್ಯಕರ್ತರು, ಜನರಿಗೂ ಸಿಗುವಂತೆ, ನೇತೃತ್ವ, ಮುಖ್ಯಮಂತ್ರಿ, ರೈತರ 50 ಸಾವಿರ, ಶ್ರಮಿಸಬೇಕು, ಸರಕಾರದ ಕಾರ್ಯಕ್ರಮ, ಸಿದ್ದರಾಮಯ್ಯ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar