ಕಾರವಾರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿವಾರಣಾ ಸೊಸೈಟಿ, ಜಿಲ್ಲಾ ಪಂಚಾಯತ ಇವರ ಆಶ್ರಯದಲ್ಲಿ ಹೊಲಿಗೆ ರಹಿತ ನೇತ್ರ ಶಸ್ತ್ರಚಿಕಿತ್ಸ ಶಿಬಿರವನ್ನು ನವೆಂಬರ 18 ರಂದು ಹಮ್ಮಿಕೊಳ್ಳಲಾಗುತ್ತಿದೆ.
ಶಿಬಿರದಲ್ಲಿ ತಜ್ಞ ವೈದ್ಯರಾದ ಡಾ. ರಮೇಶ ವೆಂಕಿಮನೆ ಹಾಗೂ ಬೆಂಗಳೂರಿನ ತಜ್ಞ ವೈದ್ಯರಾದ ಡಾ. ಸೈಯದ್ ಝಲ್ಫಿಕರ್ ಡಾ. ಚಂದ್ರಕಾಂತ ಮತ್ತು ಡಾ. ಸುಂದರಂ ಇವರುಗಳು ಶಸ್ತ್ರ ಚಿಕಿತ್ಸೆ ಶಿಬಿರವನ್ನು ನಡೆಸಿಕೊಡುವರು. ಜಿಲ್ಲಾ ಅಥವಾ ಪ್ರಾಥಮಿಕ ಕೇಂದ್ರಗಳಾದ ಮಲ್ಲಾಪುರ, ಉಳಗಾ, ಹಳಗಾ, ಸಿದ್ಧರ, ದೇವಳಮಕ್ಕಿ, ಅಂಗಡಿ ,ಚಿತ್ತಕುಲಾ, ತೋಡುರು, ಆಮದಳ್ಳಿ ಮತ್ತು ಹಾರವಾಡಗಳಲ್ಲಿ ತಮ್ಮ ಹೆಸರು ನೋಂದಾಯಿಸಿ ರಕ್ತದೊತ್ತಡ ಮತ್ತು ಮೂತ್ರ ಪರೀಕ್ಷೆಯನ್ನು ಮಾಡಿಸಿಕೊಂಡು ನವೆಂಬರ 18 ರಂದು ಶನಿವಾರ ಬೆಳಗ್ಗೆ 8.30ಕ್ಕೆ ಜಿಲ್ಲಾ ಆಸ್ಪತ್ರೆ ಕಾರವಾರ ವಿಭಾಗದಲ್ಲಿ ಹಾಜರಿರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ
Leave a Comment