ಹಳಿಯಾಳ: ಯುವಜನತೆಯು ತಮ್ಮ ಜೀವನದಲ್ಲಿ ಗುರಿಯೊಂದನ್ನು ಇಟ್ಟುಕೊಳ್ಳುವವರೆಗೂ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ‘ನೀತಿ ಆಯೋಗ’ದ ಸದಸ್ಯರಾದ, ವಿಜ್ಞಾನಿ ಡಾ. ವಿ. ಕೆ. ಸಾರಸ್ವತ್ ಹೇಳಿದರು.ಹಳಿಯಾಳ: ಯುವಜನತೆಯು ತಮ್ಮ ಜೀವನದಲ್ಲಿ ಗುರಿಯೊಂದನ್ನು ಇಟ್ಟುಕೊಳ್ಳುವವರೆಗೂ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ‘ನೀತಿ ಆಯೋಗ’ದ ಸದಸ್ಯರಾದ, ವಿಜ್ಞಾನಿ ಡಾ. ವಿ. ಕೆ. ಸಾರಸ್ವತ್ ಹೇಳಿದರು. ಮಂಗಳವಾರ ಪಟ್ಟಣದ ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ನ ಆವರಣದಲ್ಲಿರುವ ವಿದ್ಯಾಸಂಸ್ಥೆಗಳಿಗೆ ಭೇಟಿ ನೀಡಿ, ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆಯಲ್ಲಿ ಶಿಬಿರಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಅಂದುಕೊಂಡಿದ್ದನ್ನು ಸಾಧಿಸುವ ಛಲ ಯುವಜನರಲ್ಲಿ ಇರುತ್ತದೆ. ಆದರೆ ಮಹತ್ತರವಾದ ಗುರಿಯನ್ನು ಹೊಂದಿರುವ ವ್ಯಕ್ತಿ ಮಾತ್ರ ಅದನ್ನು ಸಾಧಿಸಲು ಸಾಧ್ಯ ಎಂದ ಸಾರಸ್ವತ್ ನೀತಿ ಆಯೋಗವು ಯುವಜನತೆಯನ್ನು ಗಮನದಲ್ಲಿರಿಸಿಕೊಂಡು ಹಲವು ವಿನೂತನ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಎಂದು ತಿಳಿಸಿದರು. ವಿಜ್ಞಾನಿ ಡಾ. ಸೋಂದೆ, ಸೇನೆಯ ಮಾಜಿ ಲೆಫ್ಟಿನೆಂಟ್ ಜನರಲ್ ರಮೇಶ ಹಲಗಲಿ, ಅರ್ಥಶಾಸ್ತ್ರಜ್ಞ ಪ್ರಶಾಂತ್ ಶ್ರೀನಿವಾಸ ಹಾಗೂ ಡಾ. ಭಾರದ್ವಾಜ್ ಮಾತನಾಡಿದರು. ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಸಾದ್ ಆರ್ ದೇಶಪಾಂಡೆ ಸಂಸ್ಥೆಯ ಸಾಧನೆಗಳ ಕುರಿತು ವಿವರಿಸಿದರು. ನಿರ್ದೇಶಕ ನಿತ್ಯಾನಂದ ವೈದ್ಯ, ವಿಆರ್ಡಿಎಮ್ ಟ್ರಸ್ಟ್ನ ಆಡಳಿತಾಧಿಕಾರಿ ಪ್ರಕಾಶ ಪ್ರಭು ವೇದಿಕೆಯ ಮೇಲಿದ್ದರು.
Leave a Comment