ಹಳಿಯಾಳ: ಜನತೆ ವಿರೋಧಿಸುತ್ತಿರುವಾಗಲೂ ಕ್ರೂರ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ಹೊರಟಿರುವ ರಾಜ್ಯ ಕಾಂಗ್ರೇಸ್ ಸರ್ಕಾರ ಕೇವಲ ಮತ ಬ್ಯಾಂಕಿಗಾಗಿ ರಾಜ್ಯದಲ್ಲಿ ಕೊಮುದಳ್ಳುರಿ ಸಂಭವಿಸಲು ಕಾರಣವಾಗುತ್ತಿದೆ ಎಂದು ಆಪಾದಿಸಿರುವ ಮಾಜಿ ಶಾಸಕ ಸುನೀಲ್ ಹೆಗಡೆ ಟಿಪ್ಪು ಜಯಂತಿ ಆಚರಣೆಯನ್ನು ನಿಲ್ಲಿಸುವಂತೆ ಮನವಿ ಮೂಲಕ ಆಗ್ರಹಿಸಿದ್ದಾರೆ. ಹಳಿಯಾಳ: ಜನತೆ ವಿರೋಧಿಸುತ್ತಿರುವಾಗಲೂ ಕ್ರೂರ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ಹೊರಟಿರುವ ರಾಜ್ಯ ಕಾಂಗ್ರೇಸ್ ಸರ್ಕಾರ ಕೇವಲ ಮತ ಬ್ಯಾಂಕಿಗಾಗಿ ರಾಜ್ಯದಲ್ಲಿ ಕೊಮುದಳ್ಳುರಿ ಸಂಭವಿಸಲು ಕಾರಣವಾಗುತ್ತಿದೆ ಎಂದು ಆಪಾದಿಸಿರುವ ಮಾಜಿ ಶಾಸಕ ಸುನೀಲ್ ಹೆಗಡೆ ಟಿಪ್ಪು ಜಯಂತಿ ಆಚರಣೆಯನ್ನು ನಿಲ್ಲಿಸುವಂತೆ ಮನವಿ ಮೂಲಕ ಆಗ್ರಹಿಸಿದ್ದಾರೆ. ಶುಕ್ರವಾರ ಟಿಪ್ಪು ಜಯಂತಿ ಆಚರಣೆಯನ್ನು ವಿರೋಧಿಸಿ ಪಟ್ಟಣದ ಗಣೇಶ ಕಲ್ಯಾಣ ಮಂಟಪದ ಎದುರು ಪ್ರತಿಭಟನೆ ನಡೆಸಿದ ಹಳಿಯಾಳ ಬಿಜೆಪಿ ಪಕ್ಷದವರು ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ತಹಶೀಳ್ದಾರ್ ಅವರಿಗೆ ಸಲ್ಲಿಸಿದರು. ಮನವಿಯಲ್ಲಿ ಕರ್ನಾಟಕ ಹಾಗೂ ಕೇರಳಾ ರಾಜ್ಯದಲ್ಲಿ ಹಿಂದು ಹಾಗೂ ಕ್ರೈಸ್ತರನ್ನು ಕೊಲ್ಲಿಸಿದ್ದ, ದೇವಸ್ಥಾನ, ಚರ್ಚ್ಗಳನ್ನು ಹಾಳುಗೆಡವಿದ್ದ ಓರ್ವ ಮತಾಂಧ ಟಿಪ್ಪು ಸುಲ್ತಾನ ಜಯಂತಿಯನ್ನು ಸಾಕಷ್ಟು ವಿರೋಧಗಳ ನಡುವೆಯು ಕರ್ನಾಟಕ ಸರಕಾರದಿಂದ ಆಚರಿಸುತ್ತಿರುವುದು ದುರ್ದೈವದ ಸಂಗತಿಯಾಗಿದ್ದು ಕಳೆದ ವರ್ಷ ಟಿಪ್ಪು ಜಯಂತಿ ವೇಳೆ ನಡೆದ ಅವಘಡದಲ್ಲಿ ಬಹುಸಂಖ್ಯಾತರ ಮೇಲೆ ಹಲ್ಲೆ ನಡೆಸಲಾಯಿತು ಅಲ್ಲದೇ ಆರ್.ಎಸ್.ಎಸ್.ನಾಯಕ ಕುಟ್ಟಪ್ಪರನ್ನು ಕೊಲೆ ಮಾಡಿ ಹಲವು ಜಿಲ್ಲೆಗಳಲ್ಲಿ ಕೊಮು ಶಕ್ತಿಗಳ ಅಟ್ಟಹಾಸ ಮೆರೆದಿರುವುದು ಸಿಎಂ ಸಿದ್ದರಾಮಯ್ಯ ಗಮನಕ್ಕೆ ಇದ್ದರೂ ಸಹ ಕೇವಲ ಓಟ ಬ್ಯಾಂಕ್ ರಾಜಕಾರಣಕ್ಕಾಗಿ ಜಯಂತಿ ಆಚರಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನೀಸಲಾಗಿದೆ. ಸರ್ಕಾರ ಒಂದು ವೇಳೆ ಜಯಂತಿಯನ್ನೇ ಆಚರಿಸುವುದಾದರೇ ಬಾಹಾದರೂರ ಷಾ ಜಾಫರ, ಡಾ.ಎಪಿಜೆ ಅಬ್ದುಲ್ ಕಲಾಮ್ ಸೇರಿದಂತೆ ಇನ್ನಿತರ ನಾಯಕರುಗಳ ಜಯಂತಿ ಆಚರಿಸಲಿ ಅದನ್ನು ಬಿಟ್ಟು ವಿರೋಧದ ನಡುವೆಯೂ ಟಿಪ್ಪು ಜಯಂತಿ ಆಚರಿಸುತ್ತಿರುವುದನ್ನು ಬಿಜೆಪಿ ಪಕ್ಷ ಬಲವಾಗಿ ಖಂಡಿಸುತ್ತದೆ ಮುಂದಿನ ದಿನಗಳಲ್ಲಿ ಟಿಪ್ಪು ಜಯಂತಿ ನಿಷೇಧ ಹೇರುವಂತೆ ಆಗ್ರಹಿಸಲಾಗಿದೆ. ಪ್ರತಿಭಟನೆಯಲ್ಲಿ ತಾಲೂಖಾಧ್ಯಕ್ಷ ಶಿವಾಜಿ ನರಸಾನಿ, ಮುಖಂಡರಾದ ವಿ.ಎಮ್.ಪಾಟೀಲ, ಅನಿಲ ಮುತ್ನಾಳ್, ಎಸ್.ಎ.ಶೇಟ್ಟನ್ನವರ, ವಾಸು ಪೂಜಾರಿ, ಸಂತಾನ ಸಾವಂತ, ರಾಘವೇಂದ್ರ ನಾಯ್ಕ, ವಿಜಯಕುಮಾರ ಬೋಬಾಟಿ, ನಾರಾಯಣ ಬೇಳಗಾಂವಕರ, ಯಲ್ಲಪ್ಪಾ ಸಾಣೀಕೊಪ್ಪ, ಸಿದ್ದು ಶೆಟ್ಟಿ, ವಿಲಾಸ ಯಡವಿ, ನಾರಾಯಣ ಅಂತ್ರೋಳಕರ, ಅನಿಲ ಗಿರಿ, ಈಶ್ವರ ವಾಟ್ಲೇಕರ, ಉಲ್ಲಾಸ ಬಿಡಿಕರ, ಪ್ರದೀಪ ಹಿರೆಕರ ಇತರರು ಇದ್ದರು.
Leave a Comment