ಕಾರವಾರ: ಕಿನ್ನರದ ದಿಗಾಳಿಯ ವೃದ್ಧನೋರ್ವ ಕಾಡು ಜೇನಿನ ಕಡಿತಕ್ಕೆ ಸಾವನಪ್ಪಿದ್ದ ಘಟನೆ ನಡೆದಿದೆ.
ಕಿನ್ನರದ ದಿಗಾಳಿ ನಿವಾಸಿ ವಿಠೋಬಾ ನಾಯ್ಕ (59) ಕಾಡು ಜೇನಿನ ಕಡಿತಕ್ಕೆ ಬಲಿಯಾದ ವೃದ್ಧ. ಈತನು ಉರುವಲಿಗಾಗಿ ಕಟ್ಟಿಗೆ ತರಲು ಮನೆ ಸಮೀಪದ ಕಾಡಿಗೆ ಹೋದಾಗ ಕಾಡು ಜೇನುಗಳು ಕಡಿದಿವೆ. ಜೇನಿನ ಕಡಿತದ ನೋವು ಸಹಿಸಲಾಗದ ವೃದ್ಧ ಮನೆಗೆ ಬಂದು ಮಲಗಿದ್ದಾನೆ. ಅಲ್ಲಿಯೇ ಪ್ರಜ್ಞೆ ತಪ್ಪಿದೆ. ಇದನ್ನು ಗಮನಿಸಿದ ಮನೆಯವರು ವೃದ್ಧನನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಗೋವಾದ ಬಾಂಬೋಲಿಗೆ ಸಾಗಿಸುತ್ತಿರುವಾಗ ಮಾರ್ಗ ಮಧ್ಯದಲ್ಲೆ ಕೊನೆಯುಸಿರೆಳೆದಿದ್ದಾನೆ. ಗ್ರಾಮೀಣ ಪೊಲೀಸ್ ಠಾಣೆಂiÀiಲ್ಲಿ ಪ್ರಕರಣ ದಾಖಲಾಗಿದೆ.
Leave a Comment