ಕಾರವಾರ:
ಶಿರಸಿ ಕ್ಷೇತ್ರ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಕಾರವಾರ-ಅಂಕೋಲಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿಸಬೇಕು ಎಂದು ಬಿಜೆಪಿ ಮಾಜಿ ಯುವಮೋರ್ಚಾ ಅಧ್ಯಕ್ಷ ರತನ್ ದುರ್ಗೇಕರ ಆಗ್ರಹಿಸಿದ್ದಾರೆ.
ಈ ಕುರಿತು ರಾಜ್ಯಾದ್ಯಕ್ಷ ಬಿ.ಎಸ್. ಯಡಿಯೂರಪ್ಪನವರಿಗೆ ಪತ್ರ ಬರೆದಿರುವ ಅವರು, ಈ ಹಿಂದೆ ಅಂಕೋಲಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಕಾಗೇರಿಯವರಿಗೆ ಈ ಭಾಗದಲ್ಲಿ ಅಪಾರ ಬೆಂಬಲಿಗರಿದ್ದಾರೆ. ಕಾಗೇರಿ ಸಂಘ ಪರಿವಾರದಿಂದ ಬಂದವರಾಗಿದ್ದು, ಅವರಿಗೆ ಕಾರ್ಯಕರ್ತರ ನಾಡಿ ಮಿಡಿತದ ಅರಿವಿದೆ. ಒಂದು ವೇಳೆ ಶಿರಸಿ ಮತ್ತು ಕಾರವಾರ ಎರಡೂ ಕ್ಷೇತ್ರದಿಂದ ಚುನಾವಣೆಗೆ ನಿಂತರೂ ಅವರು ಗೆಲ್ಲುತ್ತಾರೆ. ಎರಡೂ ಕಡೆ ಗೆದ್ದರೂ ಒಂದು ಕ್ಷೇತ್ರವನ್ನು ಸಂಸದ ಅನಂತ್ಕುಮಾರ್ ಹೆಗಡೆಯವರು ರಾಜ್ಯ ರಾಜಕೀಯಕ್ಕೆ ಮರಳಿದಾಗ ಬಿಡಬಹುದಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಸಂಘ ಪರಿವಾರದ ಹಿನ್ನಲೆ ಗೊತ್ತಿಲ್ಲದ ಪಕ್ಷಾಂತರಿಗಳಿಗೆ ಟಿಕೇಟ್ ನೀಡುವ ಬದಲು ಪ್ರಾಮಾಣಿಕವಾಗಿ ದುಡಿದವರನ್ನು ಅಭ್ಯರ್ಥಿಯನ್ನಾಗಿಸಿ ಎಂದು ಮನವಿ ಮಾಡಿದ್ದಾರೆ.
Leave a Comment