.ಹೊನ್ನಾವರ: ಇಂದಿನ ಮಕ್ಕಳು ದೇಶದ ಭವಿಷ್ಯ ರೂಪಿಸುವ ಪ್ರಜೆಗಳು ಎಂದು ಗ್ರಾಮ ಪಂಚಾಯತ ಸದಸ್ಯ ಪೀಟರ್ ಮೆಂಡೋನ್ಸಾ ಹೇಳಿದರು. ತಾಲೂಕಿನ ಬೆಳ್ಳುಕುರ್ವಾದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳು ಉತ್ತಮ ಶಿಕ್ಷಣವಂತರಾಗಿ ಊರಿಗೆ, ನಾಡಿಗೆ, ದೇಶಕ್ಕೆ ಕೀರ್ತಿ ತರುವಂತ ಪ್ರಜೆಯಾಗಿ ಮುನ್ನಡೆಯಿರಿ ಎಂದು ಹೇಳಿದರು. ಗ್ರಾ.ಪಂ. ಸದಸ್ಯೆ ನಾಗವೇಣಿ ಮುಕ್ರಿ, ಪಂಚಾಯತ ಪಿ.ಡಿ.ಓ ಉದಯ ಖಾರ್ವಿ, ಮಾಜಿ ಗ್ರಾ.ಪಂ.ಸದಸ್ಯ ನಾರಾಯಣ ಗೌಡ ಉಪಸ್ಥಿತರಿದ್ದರು. ಮುಖ್ಯಾಧ್ಯಾಪಕ ಎಂ. ಜಿ. ನಾಯ್ಕ ಸ್ವಾಗತಿಸಿದರು, ಶಿಕ್ಷಕರಾದ ಪ್ಲೋರಿನಾ ರೊಡ್ರಿಗೀಸ್ ಹಾಗೂ ಸುವರ್ಣಾ ಗೊನ್ಸಾಲ್ವೀಸ್ ಕಾರ್ಯಕ್ರಮ ನಿರೂಪಿಸಿದರು. ಐ.ಎಚ್. ಗೌಡ ವಂದಿಸಿದರು. ನಂತರ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳು ಹಾಗೂ ವಿವಿಧ ಮನರಂಜನಾ ಕಾರ್ಯಕ್ರಮ ನಡೆದವು.
Leave a Comment