ಹೊನ್ನಾವರ: ಭಾರತ ಸೇವಾದಳದ ಸಮಿತಿಯ ನೂತನ ತಾಲೂಕಾ ಅಧ್ಯಕ್ಷರಾಗಿ ಮಾಜಿ ಸೈನಿಕರು, ಅನಂತವಾಡಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ವಾಮನ ನಾಯ್ಕ ಆಯ್ಕೆಯಾಗಿದ್ದಾರೆ. ಜಿಲ್ಲಾ ಸಮಿತಿ ಅಧ್ಯಕ್ಷರಾದ ಯೋಗೇಶ ರಾಯ್ಕರ್ ಅಧ್ಯಕ್ಷತೆಯಲ್ಲಿ ನಡೆದ ತಾಲೂಕಾ ಸಮಿತಿಯ ಸರ್ವ ಸದಸ್ಯರ ಸಭೆಯಲ್ಲಿ ಈ ಆಯ್ಕೆ ಸರ್ವಾನುಮತದಿಂದ ನಡೆದಿರುತ್ತದೆ. ನೂತನ ಕಾರ್ಯದರ್ಶಿಗಳಾಗಿ ತಾಲೂಕಾ ರಾಜ್ಯ ಸರಕಾರಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಮಂಕಿಮಡಿ ಶಾಲೆ ಶಿಕ್ಷಕ ಉದಯ ಆರ್ ನಾಯ್ಕ ರವರು ಆಯ್ಕೆಯಾಗಿದ್ದಾರೆ. ಸಹಕಾರ್ಯದರ್ಶಿಗಳಾಗಿ ಎಚ್.ಪಿ.ಎಸ್ ಅಡಕಾರ ಶಿಕ್ಷಕಿ ವಿದ್ಯಾ ಹೆಗಡೆ ಆಯ್ಕೆಯಾಗಿದ್ದಾರೆ. ಡಾ. ಸುರೇಶ ತಾಂಡೇಲ್ ಸಂಘಟಕರಾಗಿ ಪುನರ್ಆಯ್ಕೆ ಗೊಂಡಿದ್ದಾರೆ. ತಾಲೂಕಾ ಸಮಿತಿಯ ಸಭೆಯಲ್ಲಿ ಅಣ್ಣಪ್ಪ ನಾಯ್ಕ ಮಂಕಿ, ಉದಯ ನಾಯ್ಕ ಮೂಡ್ಕಣಿ, ರಾಜೇಶ ಗುನಗಾ ಕಡತೋಕಾ ಹಾಗೂ ಶಿಕ್ಷಕ/ಶಿಕ್ಷಕಿಯರ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಉದಯ ನಾಯ್ಕ
Leave a Comment