ಕಾರವಾರ: ಕಾನೂನಿನ ಸಾಮಾನ್ಯ ಜ್ಞಾನವನ್ನು ಅರಿತುಕೊಂಡು ಪ್ರತಿಯೊಬ್ಬರು ಉತ್ತಮ ಪ್ರಜೆಯಾಗಿ ಬಾಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾದೀಶ ಟಿ. ಗೋವಿಂದಯ್ಯ ಹೇಳಿದರು.
ಜಿಲ್ಲಾ ಕಾರಾಗೃಹದಲ್ಲಿ ಕಾರಾಗೃಹದ ನಿವಾಸಿಗಳಿಗೆ ಕಾನೂನು ಅರಿವು ಮತ್ತು ಅಭಿನಯ ಸ್ಪರ್ಧಾ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ಕಾರಾಗೃಹದ ಅಧೀಕ್ಷಕರಾದ ಮಹೇಶ ಸಿ. ಶಾನಭಾಗ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅತಿಥಿ ಉಪನ್ಯಾಸಕರಾದಿ ಆಗಮಿಸಿದ ಹಿರಿಯ ನ್ಯಾಯವಾದಿ ಕೆ.ಬಿ. ನಾಯ್ಕ ಹಾಗೂ ರಾಜೇಶ್ವರಿ ಕೆ.ಬಿ. ಅವರು ಕಾನೂನಿನ ಬಗ್ಗೆ ಮಾಹಿತಿ ನೀಡಿದರು. ಕಾರಾಗೃಹದ ನಿವಾಸಿಗಳಿಗಾಗಿ ಏರ್ಪಡಿಸಿದ ಅಭಿನಯ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಬಹುಮಾನ ವಿತರಿಸಲಾಯಿತು. ನ್ಯಾಯಾಲಯದ ವ್ಯವಸ್ಥಾಪಕರಾದ ಮಹೇಶಕುಮಾರ, ಕಾರಾಗೃಹದ ವೈದ್ಯಾಧಿಕಾರಿ ಡಾ. ಗಿರೀಶ ಭೂತೆ, ನ್ಯಾಯವಾದಿ ಸಂದ್ಯಾ ತಳೇಕರ ಇತರರಿದ್ದರು.
ನ್ಯಾಯವಾದಿ ವರದಾ ನಾಯ್ಕ ನಿರ್ವಹಿಸಿದರು, ಶಿಕ್ಷಕ ರಾಘವೇಂದ್ರ ಶಾನಬಾಗ ಸ್ವಾಗತಿಸಿದರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪದ್ಮರಾಜ ವಂದಿಸಿದರು.
Leave a Comment