ಕಾರವಾರ:
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ದಿ ನಿಗಮವು 2015-16ನೇ ಸಾಲಿನ ವಿಶೇಷ ಕೇಂದ್ರಿಯ ನೆರವಿನಡಿ ಪರಿಶಿಷ್ಟ ವರ್ಗ ಸಿದ್ದಿ, ಡೊಂಗ್ರಿಗರಾಸಿಯ ಜನಾಂಗದವರ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಸೌಲಭ್ಯ ಕಲ್ಪಿಸಲು ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸಬಯಸುವರು 18 ರಿಂದ 60 ವರ್ಷವಯೋಮಾನದೊಳಗಿದ್ದು, ಪರಿಶಿಷ್ಟ ವರ್ಗ ಸಿದ್ದಿ, ಡೊಂಗ್ರಿಗರಾಸಿಯ ಉಪಜಾತಿಗೆ ಸೇರಿರಬೇಕು ಮತ್ತು ರಾಜ್ಯದಲ್ಲಿ Pಳೆದ 15 ವರ್ಷಗಳಿಂದ ವಾಸಿಸುತ್ತಿರಬೇಕು. ವಾರ್ಷಿಕ ವರಮಾನ ಗ್ರಾಮೀಣ ಪ್ರದೇಶದವರು 81 ಸಾವಿರ , ನಗರ ಪ್ರದೇಶದವರು 1,04,000/- ಸಾವಿರ ಮೀರಿರಬಾರದು. ಅರ್ಜಿ ಸಲ್ಲಿಸಿ ಸವಲತ್ತು ಪಡೆಯದೆ ಬಾಕಿಯಾಗಿರುವ ಅರ್ಜಿದಾರರು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಅದೇ ಅರ್ಜಿಗಳನ್ನು ಪುನರ್ ಪರಿಗಣಿಸಲಾಗುವುದು.
ಅರ್ಜಿ ಸಲ್ಲಿಸಲು ಡಿಸೆಂಬರ 12 ಕೊನೆಯ ದಿನವಾಗಿರುತ್ತದೆ. ಆಸಕ್ತ ಅರ್ಜಿದಾರರು ತಮ್ಮ ಹೆಸರು ವಿಳಾಸ , ವಯಸ್ಸು , ಜಾತಿ ಮತ್ತು ಉಪಜಾತಿ , ವಿದ್ಯಾರ್ಹತೆ ಸಾಲದ ಉದ್ದೇಶ ಮತ್ತು ಇರುವ ಅನುಭವ ಆಧಾಯ ಪತ್ರ , ಪೋಟೋ , ಆಧಾರ, ರೇಷನ್ ಕಾರ್ಡ , ಕೊಟೇಷನ್ , ಡೈವಿಂಗ್ ಲೈಸೆನ್ಸ್ , ತರಬೇತಿ ಪ್ರಮಾಣ ಪತ್ರ, ಬಾಡಿಗೆ ಅಗ್ರಿಮೆಂಟ್ , ಕೋಟೇಶನ್, ಪೋಟೊ ಇತ್ಯಾದಿ ದಾಖಲಾತಿಗಳ ಪ್ರತಿಗಳನ್ನು ಲಗತ್ತಿಸಿ ಭರ್ತಿ ಮಾಡಿದ ಅರ್ಜಿಯನ್ನು ಜಿಲ್ಲಾ ವ್ಯವಸ್ಥಾಪಕರು , ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭವೃದ್ದಿ ನಿಗಮ ನಿಯಮಿತ. ಹಳೇ ಜಿಲ್ಲಾ ಪಂಚಾಯತ್ ಕಟ್ಟಡ, ತಹಶೀಲ್ದಾರ ಕಚೇರಿ ಹಿಂದುಗಡೆ, ನೆಲಮಹಡಿ, ದೂರವಾಣಿ ಸಂಖ್ಯೆ 08382-226903 ಕಾರವಾರ ರವರಿಗೆ ಖುದ್ದು ಸಲ್ಲಿಸುವುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗqUಳ ಅಭಿವೃದ್ಧಿ ನಿಗಮ ನಿಯಮಿತ , ಕಾರವಾರ ರವರನ್ನು ಸಂಪರ್ಕಿಸಲು ಕೋರಿದೆ.
Leave a Comment