ಕಾರವಾರ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಿಲ್ಲಾಡಳಿತದ ಸಹಯೋಗದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರ ಮತ್ತು ರಾಜ್ಯಪ್ರಶಸ್ತಿ ವಿಜೇತ ಕನ್ನಡ ಚಿತ್ರಗಳ ಪ್ರದರ್ಶನ ಚಿತ್ರೋತ್ಸವ ಸಪ್ತಾಹದಲ್ಲಿ ಮೂರನೇ ಚಿತ್ರ ರಾಮ ರಾಮ ರೇ ದಿನಾಂಕ 19-11-2017ರಂದು ಬೆಳಿಗ್ಗೆ 10ಕ್ಕೆ ನಗರದ ಅರ್ಜುನ ಚಿತ್ರ ಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಥಾ ಹಂತರವನ್ನು ಹೊಂದಿರುವ ರಾಮ ರಾಮ ರೇ ಚಿತ್ರವನ್ನು ಕನ್ನಡ ಕಲರ್ಸ್ ಸಿನಿಮಾಸ್ ಲಾಂಚನದಲ್ಲಿ ಡಿ.ಸತ್ಯಪ್ರಕಾಶ್ ನಿರ್ದೇಶಿಸಿದ್ದಾರೆ. 2016 ಡಿಸೆಂಬರ್ 21ರಂದು ತೆರೆಗೆ ಬಂದಿರುವ ಈ ಚಿತ್ರಕ್ಕೆ 2016 ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ, ಪ್ರಥಮ ಶ್ರೇಷ್ಠ ಪ್ರಶಸ್ತಿ, ನಿರ್ದೇಶಕ ಡಿ.ಸತ್ಯಪ್ರಕಾಶ್ ಅವರಿಗೆ ಪ್ರಥಮ ಬಾರಿಗೆ ಉತ್ತಮ ಚಿತ್ರ ನಿರ್ದೇಶಿಸಿದ ನಿರ್ದೇಶಕ ಪ್ರಶಸ್ತಿ, ಅನನ್ಯ ಭಟ್ ಅವರಿಗೆ ಶ್ರೇಷ್ಠ ಗಾಯಕಿ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಬಂದಿವೆ. ಕೆ.ಜಯರಾಮ್, ಧರ್ಮಣ್ಣ ಕಡೂರು, ನಟರಾಜ್, ಬಿಂಬಶ್ರೀ ಅವರ ತಾರಾಗಣ ಚಿತ್ರಕ್ಕಿದೆ. ಅರ್ಜುನ ಚಿತ್ರಮಂದಿರದಲ್ಲಿ ಭಾನುವಾರ ಬೆಳಿಗ್ಗೆ 10ಕ್ಕೆ ಈ ಚಿತ್ರ ಉಚಿತವಾಗಿ ಪ್ರದರ್ಶನಗೊಳ್ಳಲಿದ್ದು ಚಿತ್ರಾಸಕ್ತರ ುಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಕೋರಲಾಗಿದೆ.
Leave a Comment