ಕಾರವಾರ:
ರಸ್ತೆ ಹಾಗೂ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಬೀಡಾಡಿ ಜಾನುವಾರುಗಳ ಹಾವಳಿ ವಿಪರೀತವಾಗಿದ್ದು ಇದನ್ನು ನಿಯಂತ್ರಿಸುವಂತೆ ಆಝಾದ್ ಕ್ಲಬ್ ಸಂಸ್ಥಾಪಕ ನಜೀರ್ ಅಹ್ಮದ ಶೇಖ್ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ರಾತ್ರಿ ಸಮಯದಲ್ಲಿ ರಸ್ತೆಯಲ್ಲಿ ಓಡಾಡುವ ದನಗಳಿಂದ ಅಪಘಾತಗಳ ಸಂಖ್ಯೆ ಹೆಚ್ಚಿದೆ. ದನ ಹಾಗೂ ಇತರೆ ಪ್ರಾಣಿಗಳು ರಸ್ತೆಯಲ್ಲಿಯೇ ಮಲಗುತ್ತಿರುವದರಿಂದ ಜನರಿಗೆ ತೀವೃ ತೊಂದರೆಯಾಗಿದೆ. ವಿದ್ಯುತ್ ಇಲ್ಲದ ಸ್ಥಳಗಳಲ್ಲಿ ಜನ ಅಪಘಾತಕ್ಕಿಡಾಗಿ ಗಾಯಗೊಳ್ಳುತ್ತಿದ್ದಾರೆ. ಕಾರವಾರ-ಕೋಡಿಭಾಗ ಮುಖ್ಯರಸ್ತೆ, ಎಂ.ಜಿ ರಸ್ತೆ, ಸುಂಕೇರಿ ರಸ್ತೆ ಹಾಗೂ ಶಿರವಾಡ ರೇಲ್ವೆ ಸ್ಟೇಶನ್ಗೆ ಹೋಗುವ ರಸ್ತೆಗಳಲ್ಲಿ ವಿಪರೀತ ಸಂಚಾರವಿದ್ದು, ಜಾನುವಾರುಗಳ ಉಪದ್ರವ ಹೆಚ್ಚಾಗಿದೆ. ಹೀಗಾಗಿ ಜಾನುವಾರು ಮಾಲಿಕರಿಗೆ ನೋಟಿಸ್ ನೀಡಬೇಕು. ಉತ್ತರಿಸದಿದ್ದರೆ ಜಾನುವಾರುಗಳನ್ನು ಗೋಶಾಲೆಗೆ ಸೇರಿಸಬೇಕು ಎಂದು ಆಗ್ರಹಿಸಿದ್ದಾರೆ.
Leave a Comment