ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆಯೊಂದಿಗೆ ಉದ್ಯೋಗ ಸೃಷ್ಟಿಗೆ ಜಿಲ್ಲಾಡಳಿತ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಕಾರವಾರದ ದೇವಗಡದ ಬಳಿ ಸ್ಕೂಬಾ ಡೈವಿಂಗ್ ನಡೆಸುವ ಚಿಂತನೆ ಜಿಲ್ಲಾಡಳಿತದ ಮುಂದಿದೆ.
ಮುರ್ಡೇಶ್ವರದ ನೇತ್ರಾಣಿಯಲ್ಲಿ ಸ್ಕೂಬಾ ಡೈವಿಂಗ್ ನಡೆಯುತ್ತಿದೆ. ಮೂರು ಸಂಸ್ಥೆಗಳು ಇದನ್ನು ನಡೆಸುತ್ತಿದ್ದು, ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ. ಇದರೊಂದಿಗೆ ಕಾರವಾರದ ಗುಡ್ಡಳ್ಳಿಯಲ್ಲಿ ಪ್ರವಾಸಿಗರನ್ನು ಸೆಳೆಯಲು ಜಿಲ್ಲಾಡಳಿತ ಚಾರಣ ಹಾಗೂ ಸ್ಥಳೀಯ ಸಂಸ್ಕøತಿಯನ್ನು ಪರಿಚಯಿಸುವ ಯೋಜನೆಯನ್ನು ನಡೆಸುತ್ತಿದೆ. ರಾಕ್ ಗಾರ್ಡನ್ ನಿರ್ಮಾಣ ಹಾಗೂ ಇತರೆ ಜಲ ಸಾಹಸ ಕ್ರೀಡೆಗಳು ಜಿಲ್ಲೆಯಲ್ಲಿ ಪ್ರಗತಿ ಕಾಣುತ್ತಿವೆ. ಈ ಬೆನ್ನಲ್ಲೆ ದೇವಗಡ ಸಮೀಪ ಸ್ಕೂಬಾ ಡೈವಿಂಗ್ ಅವಕಾಶಗಳಿದ್ದು, ಅದನ್ನು ಜಾರಿಗೆ ತಂದಲ್ಲಿ ಜಿಲ್ಲೆಯ ಅಭಿವೃದ್ದಿ ಸಾದ್ಯ ಎಂಬುದು ಜಿಲ್ಲಾಡಳಿತದ ಅರಿವಿಗೆ ಬಂದಿದೆ. ಹೀಗಾಗಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಕೆಲಸಗಳು ನಡೆಯುತ್ತಿದೆ. ಉತ್ತರ ಕನ್ನಡ ಜಿಲ್ಲಾ ಪ್ರವಾಸಿ ಸ್ಥಳಗಳ ಅಭಿವೃದ್ದಿ ಮತ್ತು ಸಂರಕ್ಷಣಾ ಕಾರ್ಯಕಾರಿ ಸಮಿತಿ ಎಂಬ ಸಂಸ್ಥೆಯನ್ನು ಸ್ಥಾಪಿಸಿರುವ ಜಿಲ್ಲಾಡಳಿತ ಅದರ ಮೂಲಕವೇ ಇವೆಲ್ಲ ಕೆಲಸಗಳನ್ನು ಶುರು ಮಾಡಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋಧ್ಯಮ ಬೆಳವಣಿಗೆಗೆ ಪೂರಕವಾದ ಸಾಕಷ್ಟು ಅವಕಾಶಗಳಿವೆ. ಅಂಡಮಾನ್ ಹಾಗೂ ನಿಕೋಬಾರ್ಗಳಲ್ಲಿಯೂ ಸಿಗದಂತಹ ನೀರಿನಾಳದ ಪ್ರಪಂಚ ಜಿಲ್ಲೆಯಲ್ಲಿದೆ. ಅದಕ್ಕಾಗಿ ಕಳೆದ ವರ್ಷದಿಂದ ನೇತ್ರಾಣಿಯಲ್ಲಿ ಜಿಲ್ಲಾಡಳಿತವೇ ಅಧಿಕೃತವಾಗಿ ಸ್ಕೂಬಾ ಡೈವಿಂಗ್ ಆರಂಭಿಸಿದೆ. ಪ್ರಸ್ತುತ ಇತರೆ ಕಡೆಗಳಲ್ಲಿ ಸ್ಕೂಬಾ ಡೈವಿಂಗ್ ನಡೆಸಲು ಯೋಗ್ಯ ಪ್ರದೇಶಗಳಿದ್ದರೂ ತರಭೇತಿದಾರರ ಕೊರತೆ ಇರುವದರಿಂದ ಇಲ್ಲಿನ ಜನರಿಗೆ ತರಭೇತಿ ನೀಡುವ ಉದ್ದೇಶ ಜಿಲ್ಲಾಡಳಿತಕ್ಕಿದೆ. ಹೀಗಾಗಿ ಸ್ಕೂಬಾ ಡೈವಿಂಗ್ ಮೂಲಕ ಉದ್ಯೋಗ ಅರೆಸಿಕೊಳ್ಳುವವರಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಪ್ರವಾಸಿ ಪೊಲೀಸ್ ಹಾಗೂ ಲೈಪ್ಗಾಡ್ರ್ಸ ಹುದ್ದೆಗಳನ್ನು ಸೃಷ್ಟಿಸಿ ಈಗಾಗಲೇ ಹಲವರಿಗೆ ಉದ್ಯೋಗ ನೀಡಿರುವ ಜಿಲ್ಲಾಡಳಿತ ಸದ್ಯ ಸ್ಕೂಬಾ ಡೈವಿಂಗ್ಗಾಗಿ 20 ಜನರನ್ನು ತರಭೇತಿದಾರರನ್ನಾಗಿಸಲು ಸಕಲ ಸಿದ್ದತೆ ಮಾಡಿಕೊಂಡಿದೆ.
Leave a Comment