ಕಾರವಾರ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಿಲ್ಲಾಡಳಿತದ ಸಹಯೋಗದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರ ಮತ್ತು ರಾಜ್ಯಪ್ರಶಸ್ತಿ ವಿಜೇತ ಕನ್ನಡ ಚಿತ್ರಗಳ ಪ್ರದರ್ಶನ ಚಿತ್ರೋತ್ಸವ ಸಪ್ತಾಹದಲ್ಲಿ ಆರನೇ ಚಿತ್ರ ಟಿ.ಎಸ್.ನಾಗಾಭರಣ ನಿರ್ದೇಶನದ ಅಲ್ಲಮ ದಿನಾಂಕ 22-11-2017ರಂದು ಬೆಳಿಗ್ಗೆ 10ಕ್ಕೆ ನಗರದ ಅರ್ಜುನ ಚಿತ್ರ ಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ.ಕಾರವಾರ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಿಲ್ಲಾಡಳಿತದ ಸಹಯೋಗದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರ ಮತ್ತು ರಾಜ್ಯಪ್ರಶಸ್ತಿ ವಿಜೇತ ಕನ್ನಡ ಚಿತ್ರಗಳ ಪ್ರದರ್ಶನ ಚಿತ್ರೋತ್ಸವ ಸಪ್ತಾಹದಲ್ಲಿ ಆರನೇ ಚಿತ್ರ ಟಿ.ಎಸ್.ನಾಗಾಭರಣ ನಿರ್ದೇಶನದ ಅಲ್ಲಮ ದಿನಾಂಕ 22-11-2017ರಂದು ಬೆಳಿಗ್ಗೆ 10ಕ್ಕೆ ನಗರದ ಅರ್ಜುನ ಚಿತ್ರ ಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. ಸಂಗೀತ ನಾಟಕದ ಚಿತ್ರ ಎಂದೇ ಹೇಳಬಹುದಾದ ಅಲ್ಲಮ 12ನೇ ಶತಮಾನದ ಕಥಾ ಹಂದರವನ್ನು ಹೊಂದಿದೆ. ಹಲವಾರು ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿಗಳನ್ನು ಪಡೆದ ಖ್ಯಾತಿ ಹೊಂದಿರುವ ನಟ ನಿರ್ದೇಶಕ ಟಿ.ಎಸ್.ನಾಗಾಭರಣ ಅವರ ವಿಶಿಷ್ಟ ಚಿತ್ರ ಪ್ರಯೋಗದಲ್ಲಿ ಅಲ್ಲಮ ಮೂಡಿಬಂದಿದೆ. ಧನಂಜಯ, ಮೇಘನಾ ರಾಜ್ ಪ್ರಮುಖ ತಾರಾಗಣದಲ್ಲಿದ್ದು ಸಂಚಾರಿ ವಿಜಯ್, ಲಕ್ಷ್ಮೀ ಗೋಪಾಲಸ್ವಾಮಿ, ರಾಮಕೃಷ್ಣ, ಆಶಾಲತಾ ತಾರಾಭೂಮಿಕೆಯಲ್ಲಿದ್ದಾರೆ. ಸ್ಥಳೀಯ ಕಲಾವಿದರು, ಸಂಪನ್ಮೂಲಗಳನ್ನು ಹೆಚ್ಚು ಬಳಸಿಕೊಂಡು ಅದ್ಭುತ ಚಿತ್ರವನ್ನು ನಾಗಾಭರಣ ಕನ್ನಡ ಚಿತ್ರ ಪ್ರೇಮಿಗಳಿಗೆ ಕೊಟ್ಟಿದ್ದಾರೆ. 2017 ಜನವರಿಯಲ್ಲಿ ತೆರೆಗೆ ಬಂದಿರುವ ಈ ಚಿತ್ರ ಯುನೆಸ್ಕೋ ಟೆಲಿವಿಷನ್ ಆಡಿಯೋ ವಿಷಿಯಲ್ ವಿಭಾಗದಲ್ಲಿ ಎಂಟ್ರಿ ಪಡೆದ ಕನ್ನಡದ ಮೊದಲ ಚಿತ್ರ ಎಂಬ ಖ್ಯಾತಿಗೂ ಪಾತ್ರವಾಗಿದೆ. ಅಲ್ಲದೆ, ಎನ್.ಕೆ.ರಾಮಕೃಷ್ಣ ಅವರಿಗೆ ಅತ್ಯುತ್ತಮ ಮೇಕಪ್ ಪ್ರಶಸ್ತಿ ಹಾಗೂ ಬಾಪು ಪದ್ಮನಾಭ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶನ ಪ್ರಶಸ್ತಿ ದೊರೆತಿದ್ದು ಚಿತ್ರಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜುನ ಚಿತ್ರ ಮಂದಿರಕ್ಕೆ ಆಗಮಿಸಿ ವೀಕ್ಷಿಸುವಂತೆ ಜಿಲ್ಲಾ ವಾರ್ತಾಧಿಕಾರಿ ಹಿಮಂತರಾಜು ಜಿ. ಕೋರಿದ್ದಾರೆ.
Leave a Comment