ಕಾರವಾರ: ವರದಕ್ಷಿಣೆ ಕಿರುಕುಳ ನೀಡಿ ಪತ್ನಿಯ ಸಾವಿಗೆ ಕಾರಣರಾದ ಪಂಚರಾಶಿವಾಡದ ರಾಘವೇಂದ್ರ ಎಂಬಾತರನ್ನು ದೋಷಿ ಎಂದು ನ್ಯಾಯಾಲಯ ಘೋಷಿಸಿದೆ.
2009ರ ಏಪ್ರಿಲ್ನಲ್ಲಿ ಶೋಭಾ ಎಂಬಾತರನ್ನು ಮದುವೆಯಾಗಲು 7ತೊಲೆ ಬಂಗಾರವನ್ನು ವರದಕ್ಷಿಣೆಯಾಗಿ ನೀಡುವಂತೆ ರಾಘವೇಂದ್ರ ಕೇಳಿಕೊಂಡಿದ್ದ. ಬಳಿಕ 4ತೊಲೆ ಚಿನ್ನ ಪಡೆದು ಶೋಭಾರನ್ನು ವಿವಾಹವಾಗಿದ್ದ. ಬಳಿಕ ಉಳಿದ ಚಿನ್ನವನ್ನು ನೀಡುವಂತೆ ಪೀಡಿಸುತ್ತಿದ್ದ. ನಿತ್ಯ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರಿಂದ 2009ರ ಜೂನ್ನಲ್ಲಿ ಶೋಭಾ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಐಡಿ ಪೊಲೀಸರು ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಧೀಶ ವಿ.ಎಸ್. ಧಾರವಾಡಕರ್, ಆರೋಪಿತನ್ನು ದೋಷಿ ಎಂದು ತೀರ್ಪು ನೀಡಿದ್ದಾರೆ. ನ. 27ರಂದು ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ.
Leave a Comment