ಕಾರವಾರ:
ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯ ಪ್ರಸ್ತಕ ಸಾಲೀನ ಹಿಂಗಾರು/ಬೇಸಿಗೆ ಹಂಗಾಮಿನಲ್ಲಿಯ ನೀರಾವರಿ ಭತ್ತ, ಮಳೆಯಾಶ್ರಿತ ಶೇಂಗಾ, ಹೆಸರು, ಹುರುಳಿ, ಬೆಳೆಗಳಿಗೆ ಮಾತ್ರ ವಿಮಾ ಸೌಲಭ್ಯ ಮುಂದುವರೆಸಲಾಗಿದೆ.
ಹಿಂಗಾರು ಹಂಗಾಮು ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿಯಲ್ಲಿ ಅಧಿಸೂಚಿತ ಆಯಾ ತಾಲೂಕಿನ ಹೋಬಳಿ ಬೆಳೆಗಳ ಪಟ್ಟಿ ಹೀಗಿದೆ. ಅಂಕೋಲಾ ತಾಲೂಕಿನ ಅಂಕೋಲಾ, ಬೆಲೆಕೇರಿ, ಬಳಲೆ ಮತ್ತು ಬಾಸಗೋಡ ಹಾಗೂ ಹೊನ್ನಾವರ ತಾಲೂಕಿನ ಹೊನ್ನಾವರ ಮತ್ತು ಮಂಕಿ ಹೋಬಳಿ, ಭಟ್ಕಳ ತಾಲೂಕಿನ ಮಾವಳ್ಳಿ ಹೋಬಳಿ, ಕುಮಟಾ ತಾಲೂಕಿನ ಕುಮಟಾ, ಕೂಜಳ್ಳಿ ಮತ್ತು ಗೋಕರ್ಣ ಹೋಬಳಿಗಳ ವ್ಯಾಪ್ತಿಯಲ್ಲಿ ಬೆಳೆದ ಮಳೆಯಾಶ್ರಿತ ನೆಲಗಡಲೆ/ಶೇಂಗಾ ಬೆಳೆಗೆ ವಿಮಾ ಯೋಜನೆ ನೀಡಲಾಗುವುದು. ಹೊನ್ನಾವರ ತಾಲೂಕಿನ ಹೊನ್ನಾವರ ಮತ್ತು ಮಂಕಿ ಹೊಬಳಿ ಹಾಗೂ ಭಟ್ಕಳ ತಾಲೂಕಿನ ಕೂಜಳಿ ಮತ್ತು ಮಿರ್ಜಾನ ವ್ಯಾಪ್ತಿಯಲ್ಲಿ ಬೆಳೆದ ನೀರಾವರಿ ಆಶ್ರಿತ ಭತ್ತಕ್ಕೆ, ಹಳಿಯಾಳ ತಾಲೂಕಿನ ಮುರ್ಕವಾಡ ಹೊಬಳಿ ವ್ಯಾಪ್ತಿಯಲ್ಲಿ ಬೆಳೆದ ಮಳೆಯಾಶ್ರಿತ ಹೆಸರು ಮತ್ತು ಹುರುಳಿ ಬೆಳೆ.
ಮಳೆಯಾಶ್ರಿತ ಶೇಂಗಾ ಬೆಳೆಗೆ ಪ್ರತಿ ಹೆಕ್ಟೇರ್ಗೆ ಸಾಮಾನ್ಯ ವಿಮಾ ಮೊತ್ತ ರೂ 45 sಸಾವಿರದಂತೆ ಇದ್ದು, ರೈತರು ಪಾವತಿಸಬೇಕಾದ ವಿಮಾ ಕಂತು ರೂ. 675 ಆಗಿರುತ್ತದೆ. ನೀರಾವರಿ ಆಶ್ರಿತ ಭತ್ತಕ್ಕೆ ಪ್ರತಿ ಹೆಕ್ಟೇರ್ಗೆ 85 ಸಾವಿರದಂತಿದ್ದು ರೈತರು ರೂ 1275 ಪಾವತಿಸಬೇಕು. ಮಳೆಯಾಶ್ರಿತ ಹುರುಳಿ ಬೆಳೆ ಪ್ರತಿ ಹೆಕ್ಟೇರಗೆ ವಿಮಾ ಮೊತ್ತ 17 ಸಾವಿರದಂತಿದ್ದು ವಿಮಾ ಕಂತು 255 ಪಾವತಿಸವತಿಸಬೇಕು. ಮಳೆಯಾಶ್ರಿತ ಹೆಸರು ಬೆಳೆಗೆ ವಿಮಾ ಮೊತ್ತ ರೂ.28 ಸಾವಿರದಂತಿದ್ದು ವಿಮಾ ಕಂತು ರೂ.420 ಆಗಿರುತ್ತದೆ. ಹಿಂಗಾರು ಹಂಗಾಮು ಬೆಳೆ ಸಾಲ ಪಡೆಯದ ಮತ್ತು ಪಡೆಯುವ ರೈತರು ಬ್ಯಾಂಕುಗಳಿಗೆ ಘೋಷಣೆ ಸಲ್ಲಿಸಲು ಡಿಸೆಂಬರ 30 ಕೊನೆಯ ದಿನವಾಗಿರುತ್ತದೆ.
ಬೇಸಿಗೆ ಹಂಗಾಮು ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿಯಲ್ಲಿ ಅಧಿಸೂಚಿತ ಆಯಾ ತಾಲೂಕಿನ ಗ್ರಾಮ ಪಂಚಾಯತ್ ಮಟ್ಟದ ಬೆಳೆಗಳ ಪಟ್ಟಿ ಹೀಗಿದೆ, ಹೊನ್ನಾವರ ತಾಲೂಕಿನ ನಗರಬಸ್ತಿಕೇರಿ, ಕುದ್ರಗಿ, ಮಾವಿನ ಕುರ್ವೆ ಮತ್ತು ಜಲವಳ್ಳಿ, ಹೆರಂಗಡಿ. ಸಿದ್ದಾಪೂರ ತಾಲೂಕಿನ ಹಲಗೇರಿ ಮಾತ್ರ. ಮುಂಡಗೋಡ ತಾಲೂಕಿನ ಹುನಗುಂದ, ಇಂದೂರ ಮತ್ತು ಚಿಗಳ್ಳಿ. ಜೊಯಿಡಾ ತಾಲೂಕಿನ ಕ್ಯಾಸಲರಾಕ್ ವ್ಯಾಪ್ತಿಯಲ್ಲಿ ಬೆಳೆದ ನೀರಾವರಿ ಭತ್ತದ ಬೆಳೆಗೆ ಪ್ರತಿ ಹೆಕ್ಟೇರ್ಗೆ ಸಾಮಾನ್ಯ ವಿಮಾ ಮೊತ್ತ ರೂ 85 ಸಾವಿರದಂತಿದ್ದು ರೈತರು ಪಾವತಿಸಬೇಕಾದ ವಿಮಾ ಕಂತು ರೂ. 1275 ಆಗಿರುತ್ತದೆ.
ಬೇಸಿಗೆ ಹಂಗಾಮು ಬೆಳೆ ಸಾಲ ಪಡೆಯದ ಮತ್ತು ಪಡೆಯುವ ರೈತರು ಬ್ಯಾಂಕುಗಳಿಗೆ ಘೋಷಣೆ ಸಲ್ಲಿಸಲು 28 ಫೆಬ್ರುವರಿ 2018 ಕೊನೆಯ ದಿನವಾಗಿರುತ್ತದೆ ಎಂದು ಕಾರವಾರ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment