ಹಳಿಯಾಳ: ರಿಲಾಯನ್ಸ್ ಗ್ರೂಪ್ನ ಜಿಯೋ ನೆಟವರ್ಕಗಾಗಿ ಕೆಬಲ್ ಅಳವಡಿಸಲು ಪಟ್ಟಣದಲ್ಲಿ ಯಂತ್ರಗಳ ಮೂಲಕ ಕಾಮಗಾರಿ ಆರಂಭವಾಗಿದ್ದು ಎಲ್ಲೆಂದರಲ್ಲಿ ಪ್ರಮುಖ ರಸ್ತೆಗಳಲ್ಲಿ ಕೆಬಲ್ ಅಳವಡಿಸಲು ರಸ್ತೆಗಳನ್ನು ಅಗೆದು ಹಾಗೆ ಬಿಡಲಾಗುತ್ತಿದ್ದು ಇವುಗಳಿಂದ ವಾಹನ ಸವಾರರಿಗೆ ಹಾಗೂ ಪ್ರಯಾಣಿಕರ ಸಂಚಾರಕ್ಕೆ ಸಾಕಷ್ಟು ತೊಂದರೆಗಳು ಉಂಟಾಗುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕಣ್ಣುಮುಚ್ಚಿ ಕುಳಿತಿರುವುದು ಸಾರ್ವಜನೀಕರ ಆಕ್ರೋಶಕ್ಕೆ ಕಾರಣವಾಗಿದೆ. ಪಟ್ಟಣದಲ್ಲಿ ಈಗಾಗಲೇ ಹಲವಾರು ಬಡಾವಣೆಗಳಲ್ಲಿ ಜಿಯೋ ಕೆಬಲ್ ಅಳವಡಿಕೆ ಕಾರ್ಯ ನಡೆದಿದ್ದು ಪಟ್ಟಣದ ಪ್ರಮುಖ ರಸ್ತೆಯಾದ ಬಸ್ ನಿಲ್ದಾಣದಿಂದ ಯಡೋಗಾ ಗ್ರಾಮ, ದಾಂಡೇಲಿಗೆ ಹೋಗುವ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿದ್ದು ಯಂತ್ರದ ಮೂಲಕ ನೆಲದಡಿಯಿಂದ ಕೆಬಲ್ ಅಳವಡಿಸಿದ ಬಳಿಕ ಅಲ್ಲಿ ತೊಡಲಾದ ಬೃಹತ್ ಹೊಂಡಗಳನ್ನು ಹಾಗೆಯೇ ಬಿಡಲಾಗುತ್ತಿದ್ದು ಕೆಲವೆಡೆ ಕಾಟಾಚಾರಕ್ಕೆ ಮಣ್ಣು ಮುಚ್ಚಿ ಬಿಡಲಾಗುತ್ತಿದ್ದು ಇದರಿಂದ ವಾಹನ ಸವಾರರು ಅದರಲ್ಲಿ ಸಿಲುಕಿ ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ಎದುರಾಗುತ್ತಿದೆ ಆದರೇ ಸಂಬಂಧಪಟ್ಟ ಲೊಕೊಪಯೋಗಿ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳು ಮಾತ್ರ ಸಾರ್ವಜನಿಕ ಹಿತಾಸಕ್ತಿ ಲೆಕ್ಕಿಸದೆ ಸುಮ್ಮನೆ ಕುಳಿತಿರುವುದು ಸಾರ್ವಜನೀಕರ ಆಕ್ರೋಶಕ್ಕೆ ಕಾರಣವಾಗಿದೆ. ಸಮಸ್ಯೆಯನ್ನು ಕೂಡಲೇ ಬಗೆಹರಿಸಿ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ಅಗೆಯಲಾದ ಹೊಂಡಗಳನ್ನು ಮುಚ್ಚಿ ರಸ್ತೆ ರಿಪೇರಿ ಮಾಡಬೇಕು ಇಲ್ಲದಿದ್ದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಜನತೆ ಅಧಿಕಾರಿಗಳಿಗೆ ಮೌಖಿಕವಾಗಿ ನೀಡಿದ್ದಾರೆ.
Leave a Comment