ಹಳಿಯಾಳ: ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ ಉತ್ತರಕನ್ನಡ ಜಿಲ್ಲಾಧ್ಯಕ್ಷರಾಗಿರುವ ಹಳಿಯಾಳದ ಎನ್.ಎಸ್. ಜಿವೋಜಿ ಅವರ ಕೋರಿಕೆಯ ಮೇರೆಗೆ ಕೆಕೆಎಂಪಿ ರಾಜ್ಯ ಸಮಿತಿಯು ಮಾಜಿ ಪೋಲಿಸ್ ವರಿಷ್ಠಾಧಿಕಾರಿಯಾಗಿರುವ ಜಿ.ಆರ್. ಪಾಟೀಲ ಅವರನ್ನು ಹಳಿಯಾಳ ಕೆಕೆಎಂಪಿ ತಾಲೂಕಾಧ್ಯಕ್ಷರನ್ನಾಗಿ ನೇಮಕ ಮಾಡಿದೆ ಎಂದು ರಾಜ್ಯಾಧ್ಯಕ್ಷರಾಗಿರುವ ಎಸ್. ಸುರೇಶರಾವ್ ಸಾಠೆ ಹಾಗೂ ಆಡಳಿತ ಮಂಡಳಿ ಅಧ್ಯಕ್ಷ ವಿ.ಎ. ರಾಣೋಜಿರಾವ್ ಸಾಠೆ ಅವರು ತಿಳಿಸಿದ್ದಾರೆ.
ಜಿವೋಜಿ ಅವರಿಗೆ ನೇಮಕ ಪತ್ರ ರವಾನಿಸಿರುವ ರಾಜ್ಯ ಸಮೀತಿಯವರು ತಾಲೂಕಿನ ಮರಾಠಾ ಜನಾಂಗದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಬೇಕು ಹಾಗೂ ಉತ್ತರಕನ್ನಡ ಜಿಲ್ಲಾಧ್ಯಕ್ಷರ ಜೊತೆಗೂಡಿ ನಡೆಯುವ ಕಾರ್ಯ, ಸಭೆ, ಸಮಾರಂಭಗಳಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು ಎಂದು ಪರಿಷತ್ತು ನೂತನ ತಾಲೂಕಾಧ್ಯಕ್ಷ ಜಿ.ಆರ್.ಪಾಟೀಲ್ಗೆ ತಿಳಿಸಿದೆ.
Leave a Comment