ಹಳಿಯಾಳ :ನರೇಂದ್ರ ಮೋದಿ ಅವರ ನೇತೃತ್ವದಕೇಂದ್ರ ಸರಕಾರದಅನುದಾನದಲ್ಲಿಯೇರಾಜ್ಯ ಸರಕಾರದ ಬಹುತೇಕ ಯೋಜನೆಗಳು ಮುಂದುವರೆದಿದ್ದು ಅವುಗಳು ತಮ್ಮ ಯೋಜನೆಗಳೆಂದು ರಾಜ್ಯ ಸರಕಾರವು ಪುಕ್ಕಟ್ಟೆ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದು ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರದಎಲ್ಲಾ ಯೋಜನೆಗಳು ಮತ್ತು ಅವುಗಳಿಗೆ ನೀಡಲಾಗುವಅನುದಾನದದಾಖಲೆಸಮೇತಕ್ಷೇತ್ರದಲ್ಲಿ ಪ್ರಚಾರಅಭಿಯಾನಆರಂಭಿಸಲಾಗುವುದೆಂದು ಮಾಜಿ ಶಾಸಕ ಸುನೀಲ ಹೆಗಡೆ ಹೇಳಿದರು. ಪಟ್ಟಣದಲ್ಲಿಕೇಂದ್ರ ಸರಕಾರದಿಂದ ಬಿಪಿಎಲ್ಕಾರ್ಡ ಹೊಂದಿದ ಬಡವರಿಗೆ ನೀಡಲಾಗುವಉಜ್ಜಲ್ಯೋಜನೆಯಡಿತಾಲೂಕಿನ ಸುಮಾರು 20 ಕ್ಕೂ ಅಧಿಕ ಗ್ರಾಮಗಳ 261 ಕುಟುಂಬಗಳಿಗೆ ಉಚಿತವಾಗಿ ಸಿಲೆಂಡರ್ ಮತ್ತು ಒಲೆಗಳನ್ನು ವಿತರಿಸಿ ಮಾತನಾಡಿದಅವರುಕೇಂದ್ರ ಸರ್ಕಾರದಉಜ್ಜಲ್ಯೋಜನೆಗೆ ಪೈಪೂಟಿಯನ್ನು ನೀಡಲುರಾಜ್ಯ ಸರ್ಕಾರವು ಅನಿಲ್ ಭಾಗ್ಯಯೋಜನೆರೂಪಿಸಲು ಮುಂದಾಗಿದೆ. ಮೋದಿ ಅವರು ಮುಂದಾಲೋಚನೆಯನ್ನು ಮಾಡಿ ಬಡ ಕುಟುಂಬಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಿದ್ದು ಮುಂದಿನ ದಿನಗಳಲ್ಲಿ ಅವರಿಂದಇನ್ನಷ್ಟು ಬಡಜನರಅಭಿವೃದ್ದಿಗೆ ಯೋಜನೆಗಳು ಅನುಷ್ಠಾನಕ್ಕೆ ಬರಲಿವೆ ಎಂದರು. ಕ್ಷೇತ್ರದಲ್ಲಿ ದಶಕಗಳಿಂದ ಬಂದಂತಹಅರಣ್ಯಅತಿಕ್ರಮಣ ಸಮಸ್ಯೆ ಪರಿಹಾರವಾಗಿಲ್ಲ. ಕಳೆದ ಮೂರು ವರ್ಷಗಳ ಕಾಲ ಸತತವಾಗಿ ಬರಗಾಲ ಬಿದ್ದರೂ ಸಹ ರೈತ ಕುಟುಂಬಗಳಿಗೆ ಸಮರ್ಪಕವಾಗಿ ಪರಿಹಾರದೊರೆಯದೇಅನ್ನದಾತ ಸಂಕಷ್ಠವನ್ನುಅನುಭವಿಸುವಂತಾಗಿದೆ.ಮುಂದಿನ ದಿನಗಳಲ್ಲಿ ಬಡವರಿಗೆಅನ್ಯಾಯವಾದರೇ ಬೀದಿಗೆ ಇಳಿದು ಹೋರಾಟ ಮಾಡುವ ಮೂಲಕ ಅವರಿಗೆ ನ್ಯಾಯದೊರಕಿಸಲು ಸಿದ್ದರಾಗಿದ್ದೇವೆ ಎಂದರು. ಈ ಸಂದರ್ಭದಲ್ಲಿಬಿಜೆಪಿತಾಲೂಕಾಧ್ಯಕ್ಷ ಶಿವಾಜಿ ನರಸಾನಿ, ಅನಿಲ್ ಮುತ್ನಾಳ, ಅಪ್ಪುಚರಂತಿಮಠ, ಇಲಿಯಾಸ್ ಬಳಗಾರ, ವಿ.ಎಮ್.ಪಾಟೀಲ್, ಪ್ರದೀಪ್ ಹಿರೇಕರ, ಎಸ್.ಎ.ಶೆಟವಣ್ಣವರ, ನಾರಾಯಣ ಬೆಳಗಾಂವಕರ, ಸೋನಪ್ಪಾ ಸುಣಕಾರ, ಮಾರುತಿ ಪೆಡ್ನೇಕರಇತರರುಇದ್ದರು.
Leave a Comment