ಕಾರವಾರ: ಕಾರವಾರ ಕೃಷಿ ಇಲಾಖೆಯು ಕೃಷಿಯಲ್ಲಿ ಯಂತ್ರಗಳ ಬಳಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗ್ರಾಮೀಣ ಕೃಷಿ ಯಂತ್ರೋಪಕರಣಗಳ ಸೇವಾ ಕೇಂದ್ರ ಸ್ಥಾಪಿಸಲು ಅರ್ಜಿ ಆಹ್ವಾನಿಸಿದೆ.
ಕಾರವಾರ ತಾಲೂಕಿನ ಬಾಡ ಹೋಬಳಿಯ ನಗರಸಭೆ ವ್ಯಾಪ್ತಿ ಹೊರತುಪಡಿಸಿದ ಪ್ರದೇಶದಲ್ಲಿ ಕೃಷಿಗೆ ಪೂರಕವಾದ ಟ್ರ್ಯಾಕ್ಟರ್, ಪವರ್ ಟಿಲ್ಲರ್, ಪಂಪ್ ಸೆಟ್, ಸ್ಪ್ರೇಯರ್ ಇತರೇ ಕೃಷಿ ಯಂತ್ರೋಪಕರಣಗಳ, ಬೋರ್ವೆಲ್ಗಳ ಹಾಗೂ ಸೂಕ್ಷ್ಮ ನೀರಾವರಿ ಘಟಕಗಳ ದುರಸ್ಥಿ ಕೇಂದ್ರವನ್ನು ಪ್ರಾರಂಭಿಸಲು ಕ್ರಮ ವಹಿಸಬೇಕಾಗಿದೆ. ರೈತರಿಗೆ ಸಕಾಲದಲ್ಲಿ ಅವರ ಯಂತ್ರೋಪಕರಣಗಳನ್ನು ದುರುಸ್ಥಿ ಮಾಡಿಸಿಕೊಳ್ಳಲು ಅನುಕೂಲವಾಗುವಂತೆ ದುರಸ್ಥಿ/ಸೇವಾ ಕೇಂದ್ರದಲ್ಲಿ ಅವಶ್ಯವಿರುವ ಟೂಲ್ಕಿಟ್, ಗ್ರೈಂಡಿಂಗ್ ಮಸೀನ್, ಹ್ಯಾಂಡ್ ಡ್ರಿಲ್ಲಿಂಗ್, ವೆಲ್ಡಿಂಗ್, ಸ್ಪೋಟ್ ವೆಲ್ಡಿಂಗ್, ಏರ್ ಕಾಂಪ್ರೆಸರ್ ಹಾಗೂ ಇತರೇ ಅವಶ್ಯವಿರುವ ಉಪಕರಣಗಳನ್ನು ನಿರ್ವಹಿಸಬೇಕಾಗಿರುತ್ತದೆ.
ಸಾಮಾನ್ಯ ವರ್ಗದ ರೈತರಿಗೆ ಶೇಕಡಾ 50ರಷ್ಟು ಗರಿಷ್ಟ 5 ಲಕ್ಷಗಳ ವರೆಗೆ ಮತ್ತು ಪ.ಜಾ/ಪ.ಪಂಗಡ ರೈತರಿಗೆ ಶೇಕಡಾ 75ರಷ್ಟು ಗರಿಷ್ಟ 7.5 ಲಕ್ಷಗಳ ವರೆಗೆ ಪ್ರೋತ್ಸಾಹ ಧನವನ್ನು ನೀಡಬಹುದಾಗಿದೆ. ಪ್ರೋತ್ಸಾಹ ಧನವನ್ನು ರಾಷ್ರ್ರೀಕೃತ/ಪ್ರಾದೇಶಿಕ ಗ್ರಾಮೀಣ/ಸಹಕಾರಿ/ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ಗಳಲ್ಲಿ ಪಡೆದ ಸಾಲದ ಆಧಾರದ ಮೇಲೆ 1 ಬಾರಿ ಮಾತ್ರ ನೀಡಲಾಗುವುದು.
ಕೃಷಿಯಲ್ಲಿ ಇಂಜಿನಿಯರಿಂಗ್ ಡಿಪ್ಲೋಮಾ/ಕೃಷಿ ಡಿಪ್ಲೋಮಾ/ಆಟೋ ಮೊಬೈಲ್ ಡಿಪ್ಲೋಮಾ/ ಮೆಕ್ಯಾನಿಕಲ್ ಡಿಪ್ಲೋಮಾ/ಐ.ಟಿ.ಐ/ಪಿ.ಯು.ಸಿ. ತೇರ್ಗಡೆ ಹೊಂದಿರುವ ಮತ್ತು ರೈತ ಕುಟುಂಬಕ್ಕೆ ಸೇರಿದ ಹಾಗೂ ಕೃಷಿ ವಿಶ್ವವಿದ್ಯಾನಿಲಯದಿಂದ ಕೃಷಿ ಯಂತ್ರೋಪಕರಣಗಳ ದುರಸ್ತಿ ಹಾಗೂ ನಿರ್ವಹಣೆ ತರಬೇತಿ ಪಡೆದಿರುವ ಗ್ರಾಮೀಣ ಯುವಕರು ಮಾತ್ರ ಅರ್ಹರು. ಕನಿಷ್ಠ 20ಅಡಿ ಅಳತೆಯ ಕೊಠಡಿ ಅಥವಾ ಗೋದಾಮು ಹೊಂದಿರುವ ರೈತರ ಮಕ್ಕಳು ಜನವರಿ 10 ರೊಳಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆ ಮತ್ತು ಹೆಚ್ಚಿನ ಮಾಹಿತಿಗಾಗಿ ಕಾರವಾರ ಕೃಷಿ ನಿರ್ದೇಶಕರ ಕಚೇರಿ ಸಂಪರ್ಕಿಸಬಹುದಾಗಿದೆ.
Leave a Comment