ಹಳಿಯಾಳ: ಹೊನ್ನಾವರದ ಪರೇಶ ಮೇಸ್ತ ಹತ್ಯೆಗೆ ಕಾರಣರಾದವರನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು ಸೇರಿದಂತೆ ಇನ್ನಿತರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮೀತಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ರಾಷ್ಟ್ರೀಯ ಹಿಂದೂ ಆಂದೋಲನ ಸಮೀತಿಯ ನೇತೃತ್ವದಲ್ಲಿ ಹಳಿಯಾಳ ವಿವಿಧ ಹಿಂದೂ ಸಂಘಟನೆಗಳನ್ನೊಳಗೊಂಡು ಹಿಂದೂ ಜನಜಾಗೃತಿ ಸಮೀತಿಯು ಇಲ್ಲಿಯ ತಹಶೀಲ್ದಾರ್ ಕಚೇರಿಗೆ ಆಗಮಿಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಮನವಿಯಲ್ಲಿ ಪದ್ಮಾವತಿ ಚಲನಚಿತ್ರದಲ್ಲಿ “ಘೂಮರ” ಹಾಡಿನಲ್ಲಿ ರಾಣಿ ಕುಣಿಯುತ್ತಿರುವ ಹಾಡನ್ನು ತೆಗೆಯಬೇಕು, ಜನೆವರಿ 1 ರವರೆಗೆ ಪಟಾಕಿಯ ಮೇಲೆ ನಿರ್ಭಂಧ ಹೇರಬೇಕು, ಕಾಶ್ಮೀರ “ಹೊಮ್ ಲ್ಯಾಂಡ್ ಡೇ” ಈ ಸಮಯದಲ್ಲಿ ಜಮ್ಮು –ಕಾಶ್ಮೀರದ 4500 ಕಲ್ಲೆಸೆತುದಾರರು ಅತಂಕವಾದಿಗಳ ಮೇಲೆ ಹಾಕಿರು ಕೇಸನ್ನು ಯಾವುದೇ ಕಾರಣಕ್ಕೂ ಹಿಂತೆಗದುಕೊಳ್ಳಬಾರದೆಂದು ಆಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ಸಮೀತಿಯ ನಿತೀನ ಢಾಂಗೆ, ಧರ್ಮರಾಜ ಪಾಟೀಲ, ವಿನೋದ ಗಿಂಡೆ, ಕಮಲ, ವಿಲಾಸ ಕಣಗಲಿ, ಕಾಂಚನಾ ರಜಪೂತ, ನಯನಾ ಬಾಂದೇಕರ ಇತರರು ಇದ್ದರು.
Leave a Comment