ಹಳಿಯಾಳ: ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ ರಾಜ್ಯ ಮಟ್ಟದ ಪ್ರೌಢ ಶಾಲೆಗಳ ಟೇಬಲ್ ಟೆನ್ನಿಸ ಪಂದ್ಯಾವಳಿಂiÀiಲ್ಲಿ ಭಾಗವಹಿಸಿದ ಹಳಿಯಾಳದ ಕ್ರೀಡಾ ಭವನದ ಕ್ರೀಡಾ ಪಟುಗಳು ರಾಜ್ಯಕ್ಕೆ ಮೊದಲ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆಂದು ತರಬೇತುದಾರ ಉದಯ ಜಾಧವ ತಿಳಿಸಿದ್ದಾರೆ. ವಿದ್ಯಾರ್ಥಿ ಕ್ರೀಡಾಪಟುಗಳಾದ ಶಾಶ್ವತ ಪರಶುರಾಮ ತೋಟಗೇರ, ಅಭಿರಾಮ ರಾಮ ನಾರಾಯಣ ಐತಾಳ, ಕಿರಣ ಸುಭಾಸ ಧಾರವಾಡಕರ ಇದೇ ಬರುವ ಜನೇವರಿ 03 ರಂದು ಗುಜರಾತಿನ ವಡೊದರದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆಂದು ಅವರು ತಿಳಿಸಿದ್ದಾರೆ. ಇವರ ಸಾಧನೆಗೆ ಕ್ರೀಡಾ ಭವನದ ಅಧ್ಯಕ್ಷ ಶ್ರೀಪತಿ ಭಟ್ಟ ಮತ್ತು ಕ್ರೀಡಾ ಭವನದ ಸರ್ವಸದಸ್ಯರು ಅಭಿನಂದಿಸಿದ್ದಾರೆ.
Leave a Comment