ಹಳಿಯಾಳ : ವಿವಿಧ ಕಾರಣಗಳಿಂದ ಸಂಕಷ್ಟದಲ್ಲಿರುವ ರೈತರು ಹಾಗೂ ಇತರ ಕಟ್ ಬಾಕಿ ಸಾಲಗಾರರಿಗೆ ರೂ.20 ಲಕ್ಷ ವರೆಗಿನ ವಿಶೇಷ ಏಕ ಗಂಟು ಸಾಲ ಇತ್ಯಥ್ರ್ಯ (ಓಟಿಎಸ್) ಗೊಳಿಸುವ ಯೋಜನೆಯೊಂದು ಸ್ಟೇಟ್ ಬ್ಯಾಂಕ ಸಂಸ್ಥೆ ಪ್ರಸ್ತುತ ಪಡಿಸಿದ್ದು ಈ ರೀತಿ ಇತ್ಯರ್ಥಗೊಳಿಸುವ ಸಾಲದ ಮೊತ್ತ ರೂ. 25 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಎಸ್.ಬಿಐ ಬ್ಯಾಂಕಿನ ಉಪ ಮಹಾಪ್ರಬಂಧಕ ವ್ಯವಸ್ಥಾಪಕ ಇಂದ್ರನೀಲ ಭಾಂಜಾ ಹೇಳಿದರು. ಪಟ್ಟಣದ ಎಸ್ಬಿಐ ಬ್ಯಾಂಕನಲ್ಲಿ ನಡೆದ ಓಟಿಎಸ್ ಯೋಜನೆಯ ಗ್ರಾಹಕರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಸೆಪ್ಟಂಬರ 30 2016 ರಂದು ಕಟ್ ಬಾಕಿ ಇರುವ ಸಾಲದಲ್ಲಿ ಶೇ. 25 ರಿಂದ 50 ರ ವರೆಗೆ ರಿಯಾಯಿತಿ ಪಡೆಯಲು ಅವಕಾಶವಿದ್ದು ಸಾಲ ಸೃಷ್ಟಿಯಾದ ದಿನದಿಂದ ಬಡ್ಡಿ ರಿಯಾಯಿತಿ ಇದೆ. ಒಪ್ಪಿಗೆಯ ಪತ್ರದ ಜೊತೆಗೆ ಶೇ. 10 ಹಣವನ್ನು ಸಂದಾಯ ಮಾಡಬೇಕು ಹಾಗೂ ನೊಂದಣಿಯ ಕೊನೆಯ ದಿನಾಂಕ ಜನವರಿ 31, 2018 ಇರುತ್ತದೆ ಎಂದು ತಿಳಿಸಿದರು. ಹಳಿಯಾಳ ಬ್ಯಾಂಕ ವ್ಯವಸ್ಥಾಪಕ ಶ್ರೀಕಾಂತ ಮಾತನಾಡಿ ಸಂಕಷ್ಟದಲ್ಲಿರುವ ಕಟ್ ಬಾಕಿ ಸಾಲಗಾರರು ಬ್ಯಾಂಕ ವ್ಯವಸ್ಥಾಪಕರಿಗೆ ಸಂಪರ್ಕಿಸಿ ಸಮಸ್ಯೆ ಪರಿಹರಿಸಿಕೊಳ್ಳುವಂತೆ ಕೊರಿದರು. ಬ್ಯಾಂಕಿನ ಸಿಬ್ಬಂದಿಗಳು, ಪತ್ರಕರ್ತರಾದ ಬಿ.ಆರ್.ವಿಭೂತೆ, ಎಸ್ ಮಂಜುನಾಥ ಇದ್ದರು.
Leave a Comment