ಹಳಿಯಾಳ: ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ 41 ದಿನಗಳ ಕಾಲ ಕಠಿಣ ವೃತವನ್ನು ಆಚರಿಸಿದ ಪಟ್ಟಣ ಹಾಗೂ ಗ್ರಾಮಾಂತರ ಭಾಗದ 200ಕ್ಕೂ ಹೆಚ್ಚು ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಶಬರಿಮಲೆಯಲ್ಲಿ ಜನೆವರಿ ದಿ.14ರಂದು ಮಕರ ಜ್ಯೋತಿಯನ್ನು ನೋಡಲು ಇರುಮುಡಿ ಕಟ್ಟಿಕೊಂಡು ಹಳಿಯಾಳದಿಂದ ಪ್ರಯಾಣ ಬೆಳೆಸಿದರು. ಪಟ್ಟಣದ ನಿಸರ್ಗಧಾಮದ ಎದುರಿನ ಶಬರಿನಗರದಲ್ಲಿರುವ ಶ್ರೀ ಅಯ್ಯಪ್ಪಸ್ವಾಮೀಯ ದೇವಸ್ಥಾನದಲ್ಲಿ 41 ದಿನಗಳ ಕಾಲ ಅಯ್ಯಪ್ಪ ಸ್ವಾಮಿಯ ವೃತವನ್ನು ಆಚರಿಸಿ ಮಂಗಳವಾರ ಸ್ವಾಮಿಯ ದರ್ಶನಕ್ಕೆ ತೆರಳಿದರು. ಮಾಲಾಧಾರಿಗಳಲ್ಲಿ 5 ಮರಿ ಸ್ವಾಮಿಜಿಗಳು ಇರುವುದು ವಿಶೇಷವಾಗಿದೆ. ಸತತ 18 ವರ್ಷ ಮಾಲೆ ಧರಿಸಿದ ಸ್ವಾಮಿಗಳಾದ ವಿಠ್ಠಲ ನವಲೆ ಗೋಕುಳ ಜಾಧವ ತೆಂಗಿನ ಸಸಿಯನ್ನು ಅಯ್ಯಪ್ಪಸ್ವಾಮಿಯ ಪರಂಪರೆಯಂತೆ ಸನ್ನಿಧಿಗೆ ತೆಗೆದುಕೊಂಡು ಹೊದರು. ಈ ಸಂದರ್ಭದಲ್ಲಿ ಹಿರಿಯ ಗುರುಸ್ವಾಮಿ ವಿಲಾಸ ತೇಲಂಗ, ಶ್ರೀ ಅಯ್ಯಪ್ಪ ಸ್ವಾಮಿಯ ಸನ್ನಧಿ ಸೇವಾ ಸಂಘದ ಅಧ್ಯಕ್ಷರಾದ ಗುರುಸ್ವಾಮಿ ಮಂಜುನಾಥ ತೆಲಂಗರವರ ನೇತೃತ್ವದಲ್ಲಿ ಗುರುಸ್ವಾಮಿ ಸಹದೇವ ಬೈರಪ್ಪನ್ನವರ, ಸಂತೋಷ ಘಟಕಾಂಬ್ಳೆ, ಸರ್ಜನ ಮಾದರ, ರಘು ನಾಯ್ಕ, ಯಲ್ಲಪ್ಪಾ ಮಾಲವಣ್ಣಕರ, ಮಹಾದೇವ ಚಲವಾದಿ, ಮೋಹನ ರೇಡೆಕರ, ವಿಲಾಸ ಕಣಗಲಿ, ಷಣ್ಮುಕ ಚಲವಾದಿ, ಪರಶುರಾಮ ಗೊಂಧಳಿ, ರಾಘವೇಂದ್ರ ನಾಯ್ಕ, ವಿಕ್ರಾಂತ ಶೆಟ್ಟಿ, ಸಂಗಮೇಶ ಚಲವಾದಿ, ಶರತ ಶೆಟ್ಟಿ, ಶಿವರಾಜ ಪಾಟೀಲ್ ಇದ್ದರು.
Leave a Comment