ಹಳಿಯಾಳ:ತಾಲೂಕಿನ ಜನರ ಬಹುದಿನದ ಬೇಡಿಕೆಯಾದ ರಾತ್ರಿ ವೇಳೆಯಲ್ಲಿ ಮೈಸೂರಿಗೆ ಸ್ಲೀಪರ್ ಕೊಚ್ ಬಸಗಳ ಸಂಚಾರವನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ “ನಾನ್ ಎಸಿ ಸ್ಲೀಪರ್ಕೊಚ್” ನೂತನ ಸಾರಿಗೆ ಬಸ್ ಸಂಚಾರ ಪ್ರಾರಂಬಿಸಲಾಗಿದ್ದು ಮುಂದಿನ ದಿನಗಳಲ್ಲಿ ಇನ್ನೂ ಕೆಲವು ನೂತನ ಬಸ ಸಂಚಾರವನ್ನು ಪ್ರಾರಂಭಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್ ವಿ ದೇಶಪಾಂಡೆ ಹೇಳಿದರು. ಪಟ್ಟಣದ ಬಸ ನಿಲ್ದಾಣದಲ್ಲಿ ಇತ್ತೀಚೆಗೆ ಮೈಸೂರ ಬಸ್ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು ಪ್ರಯಾಣಿಕರಿಗೆ ಒಳ್ಳೆಯ ಸಂಚಾರ ವ್ಯವಸ್ಥೆ ನಿಡುವಲ್ಲಿ ಸರ್ಕಾರ ಬದ್ಧವಾಗಿದ್ದು ಪ್ರಯಾಣಿಕರು ಸರ್ಕಾರಿ ಸಾರಿಗೆ ಬಸ್ಗಳಲ್ಲಿ ಪ್ರಯಾಣಿಸುವ ಮೂಲಕ ಸಂಸ್ಥೆಯ ಪ್ರಗತಿಗೆ ಸಹಕರಿಸಿರಿ ಎಂದು ಕರೆ ನೀಡಿದರು. ಅದರಂತೆ ಸಾರಿಗೆ ಅಧಿಕಾರಿಗಳು, ಸಿಬ್ಬಂದಿಗಳು ಕೂಡಾ ಪ್ರಯಾಣಿಕರಿಗೆ ಒಳ್ಳೆ ಸೇವೆ ನೀಡಬೇಕೆಂದು ಸಲಹೆ ನೀಡಿದರು. ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಕೂಡ ಪ್ರಯಾಣಿಕರ ಬೇಡಿಕೆಯಂತೆ ನೂತನ ಬಸ್ ಸಂಚಾರ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುವುದು ಅದರಂತೆ ಬಸ್ ನಿಲ್ದಾಣ, ಬಸ್ ಘಟಕ,ಗಳನ್ನು ಆಧುನೀಕರಣಗೊಳಿಸುವಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ ಎಂದರು. ಈ ಸಂದರ್ಭದಲ್ಲಿ ವಾಯುವ್ಯ ಸಾರಿಗೆ ಸಂಸ್ಥೆಯ ಅಧ್ಯಕ್ಷ ಸದಾನಂದ ಡಂಗನವರ ಮಾತನಾಡಿ ವಾಯುವ್ಯ ಸಾರಿಗೆ ಸಂಸ್ಥೆಯ ವ್ಯಾಪ್ತಿಯ 4496 ಗ್ರಾಮಗಳಿಗೆ 4906 ಬಸಗಳು ಸಂಚರಿಸುತ್ತಿದ್ದು ಕಳೆದ ನಾಲ್ಕೂವರೆ ವರ್ಷದಲ್ಲಿ 300 ನೂತನ ಬಸ್ಗಳು ಬಂದಿವೆ ಎಂದು ತಿಳಿಸಿದರು. ವಾ.ಕ.ರ.ಸಾ.ಸಂಸ್ಥೆ 8 ವಿಭಾಗಗಳಲ್ಲಿ 48 ಘಟಕಗಳನ್ನು ಹೊಂದಿದ್ದು ಎಪ್ರಿಲ್-ಮೇ ಒಳಗಾಗಿ ಎಲ್ಲಾ ಸಾರಿಗೆ ಸಂಸ್ಥೆಯಲ್ಲಿ ಐ.ಟಿ.ಎಮ್.ಎಸ್ ತಂತ್ರಜ್ಞಾನ ಬಳಸಿ ಎಲ್ಲ ಬಸ್ ನಿಲ್ದಾಣಗಳಲ್ಲಿ ಸಿ.ಸಿ ಟಿವಿ ಅಳವಡಿಕೆ, ಬಸಗಳಿಗೆ ಜಿ.ಪಿ.ಎಸ್ ತಂತ್ರಜ್ಞಾನ ಅಳವಡಿಕೆ ಹಾಗೂ ನೂತನವಾಗಿ ಅಭಿವೃದ್ಧಿ ಪಡಿಸಿದ ಆ್ಯಪ್ನಲ್ಲಿ ಸಾರ್ವಜನಿಕರಿಗೆ ಬಸ್ಸಗಳ ವೇಳಾಪಟ್ಟಿ ಸೇರಿದಂತೆ ಸಾರಿಗೆ ವ್ಯವಸ್ಥೆಯ ಎಲ್ಲಾ ಮಾಹಿತಿಯು ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಘಟಕ ವ್ಯವಸ್ಥಾಪಕ ಎಲ್.ಎಚ್.ರಾಠೋಡ ಮಾತನಾಡಿ ಹಳಿಯಾಳ ಬಸ್ನಿಲ್ದಾಣದಿಂದ ಮೈಸೂರ ಬಸ್ ರಾತ್ರಿ 7-30 ಘಂಟೆಗೆ ಹೊರಟು ರಾ.8.30ದಾಂಡೇಲಿ, 9.30 ಯಲ್ಲಾಪೂರ, 11.15 ಶಿರಶಿ 2.30 ಶಿವಮೊಗ್ಗ 4.50 ಅರಶಿಕೇರೆ, ಚನ್ನರಾಯಪಟ್ಟಣ ಮಾರ್ಗವಾಗಿ ಮೈಸೂರಿಗೆ ಬೆಳಿಗ್ಗೆ 7.30ಕ್ಕೆ ತಲುಪಲಿದೆ ಎಂದರು. ಈ ಸಂದರ್ಭದಲ್ಲಿ ಜಿ.ಪಂ ಉಪಾಧ್ಯಕ್ಷ ಸಂತೋಷ ರೇಣಕೆ, ಸದಸ್ಯ ಕೃಷ್ಣಾ ಪಾಟೀಲ, ಬ್ಲಾಕ ಅಧ್ಯಕ್ಷ ಸುಬಾಸ ಕೊರ್ವೆಕರ, ಧಾರವಾಡ ವಿಭಾಗೀಯ ತಾಂತ್ರಿಕ ಶಿಲ್ಪಿ ರಾಧಾಕೃಷ್ಣ, ವಿಭಾಗೀಯ ಸಂಚಾರ ಅಧಿಕಾರಿ ಚನ್ನಪ್ಪ ಗೌಡರ, ನಿರ್ದೇಶಕ ಬಸಣ್ಣಗೌಡಾ, ಪಿ.ಎ ಶಿವರೆಡ್ಡಿ, ಹರೀಶ ಹಳ್ಳಿಕೇರಿ, ಉಮೇಶ ಬೊಳಶೆಟ್ಟ, ಘಟಕಪಾರು ಪತ್ತೆಗಾರ ಶ್ರೀಶೈಲ್ ಮಬ್ರೂಕರ, ಪರಶುರಾಮ ಕಾಂಬ್ಳೆ ಇದ್ದರು.
Leave a Comment