ಹಳಿಯಾಳ: ಪೆಟ್ರೋಲ್, ಇಂಧನ, ಅಡುಗೆ ಅನಿಲ ದರಗಳಲ್ಲಿ ಆಗುತ್ತಿರುವ ಬೆಲೆ ಏರಿಕೆ ವಿರೋಧಿಸಿ ಶನಿವಾರ ಹಳಿಯಾಳ ಪಟ್ಟಣದಲ್ಲಿ ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಲಾಯಿತು. ವಾಹನ ಮಾಲೀಕರು ಹಾಗೂ ಕಾಂಗ್ರೇಸ್ ಕಾರ್ಯಕರ್ತರು ಜಂಟಿಯಾಗಿ ನಡೆಸಿದ ಪ್ರತಿಭಟನಾ ಮೇರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ತಹಶೀಲ್ದಾರ್ ಕಾರ್ಯಾಲಯಕ್ಕೆ ತೆರಳಿ ಮನವಿ ಸಲ್ಲಿಸಿದರು. ಮನವಿಯಲ್ಲಿ ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಬೆಲೆ ಹೆಚ್ಚಿದ್ದರೂ ಸಹ ಭಾರತದಲ್ಲಿ ಪೂರೈಕೆ ಮಾಡುವ ಇಂಧನದ ಬೆಲೆಯಲ್ಲಿ ಏರಿಕೆಯಾಗಿರಲಿಲ್ಲ ಆದರೇ ಪ್ರಸ್ತುತ ಕೇಂದ್ರದ ಬಿಜೆಪಿ ಸರ್ಕಾರ ಇಂಧನ ಹಾಗೂ ಅಡುಗೆ ಅನಿಲ ದರದಲ್ಲಿ ಗಣನೀಯವಾಗಿ ಬೆಲೆ ಏರಿಕೆ ಮಾಡುತ್ತಾ ಸಾಗಿದ್ದು ಉಪಜೀವನ ನಡೆಸಲು ಸಾಲ ಸೂಲ ಮಾಡಿ ವಾಹನ ಖರಿದಿಸಿ ಭಾಡಿಗೆ ಹೊಡೆಯುವ ವಾಹನ ಮಾಲಿಕರಿಗೆ, ರೀಕ್ಷಾ, ಗೂಡ್ಸ್ ವಾಹನಗಳವರು ತೀರಾ ಸಂಕಷ್ಟ ಅನುಭವಿಸುತ್ತಿರುವುದು ಕಂಡು ಬರುತ್ತಿದೆ ಎಂದ ಅವರು ರಾಜ್ಯಪಾಲರು ಕೇಂದ್ರ ಸರ್ಕಾರಕ್ಕೆ ಈ ಸಮಸ್ಯೆ ಯುದ್ದೊಪಾದಿಯಲ್ಲಿ ಬಗೆಹರಿಸಿ ಬಡ ವಾಹನ ಚಾಲಕ, ಮಾಲಕರಿಗೆ ಸಹಾಯ ಮಾಡಬೇಕೆಂದು ಕೊರಲಾಗಿದೆ. ಪುರಸಭಾ ಅಧ್ಯಕ್ಷ ಶಂಕರ ಬೆಳಗಾಂವಕರ, ಎಪಿಎಮ್ಸಿ ಅಧ್ಯಕ್ಷ ಶ್ರೀನಿವಾಸ ಘೊಟ್ನಕರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವಾಹನ ಮಾಲಕರು, ಚಾಲಕರು,ಕಾಂಗ್ರೇಸ್ ಕಾರ್ಯಕರ್ತರಾದ ಜಿಡಿ ಗಂಗಾಧರ, ಬಿಡಿ ಚೌಗಲೆ, ಶಿವಪುತ್ರ ನುಚ್ಚಂಬ್ಲಿ, ಸಂತೋಷ ಹುಂಡೇಕರ, ನಾಗರಾಜ ಪಾಟೀಲ್, ಮಾಲಾ ಬ್ರಗಾಂಜಾ, ರೋಹನ ಬ್ರಗಾಂಜಾ,ಗುಲಾಬಷಾ ಲತಿಫನವರ, ವಾಮನ ಮಿರಾಶಿ ಮೊದಲಾದವರು ಇದ್ದರು.
Leave a Comment