ಹಳಿಯಾಳ: ಉಪ ಜೀವನಕ್ಕಾಗಿ ಕಳೆದ ಅನೇಕ ವರ್ಷಗಳಿಂದ ಅರಣ್ಯ ಜಮೀನನ್ನು ಅತೀಕ್ರಮಣ ಮಾಡಿ ಸಾಗುವಳಿ ಮಾಡಿಕೊಂಡು ಬಂದಿರುವ ರೈತರಿಗೆ ಜಿಪಿಎಸ್ ಮಾಡಿದ ಜಮೀನುಗಳನ್ನು ಖಾಯಂ ತರೀಖ್ ಮಂಜೂರು ಮಾಡಿ ಪಟ್ಟಾ ವಿತರಿಸುವಂತೆ ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರಿಗೆ ದಲಿತ ಸಂಘರ್ಷ ಸಮೀತಿ ಕೆಂಪು ಸೇನೆ ಹಳಿಯಾಳದಲ್ಲಿ ಮನವಿ ಸಲ್ಲಿಸುವ ಮೂಲಕ ಆಗ್ರಹಿಸಿದೆ. ಪಟ್ಟಣದ ಅರ್ಬನ್ ಬ್ಯಾಂಕ್ ವೃತ್ತದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೇರವಣಿಗೆ ನಡೆಸಿದ ಕೆಂಪು ಸೇನೆಯವರು ಇಲ್ಲಿಯ ಮಿನಿ ವಿಧಾನ ಸೌಧದ ಎದುರು ಸಮಾವೇಶಗೊಂಡು ಸುಮಾರು 3 ಗಂಟೆಗೂ ಅಧಿಕ ಕಾಲ ಪ್ರತಿಭಟನೆ ನಡೆಸಿದರು ಈ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಸಚಿವ ದೇಶಪಾಂಡೆ ಅವರಿಗೆ ಮನವಿ ಸಲ್ಲಿಸಿ ರೈತರ ದಶಕಗಳ ಸಮಸ್ಯೆಗೆ ಸ್ಪಂದಿಸುವಂತೆ ಒತ್ತಾಯಿಸಿದರು. ಮನವಿಯಲ್ಲಿ ಸುಮಾರು 70 ವರ್ಷದ ಕಾಲದಿಂದ ಜಿಲ್ಲೆಯಲ್ಲಿ ಅನೇಕ ಬಡ ರೈತರು ಅರಣ್ಯ ಜಮೀನುಗಳನ್ನು ಅತಿಕ್ರಮಣ ಮಾಡಿ ತಮ್ಮ ಉಪ ಜೀವನಕ್ಕಾಗಿ ಸದರ ಜಮೀನುಗಳಲ್ಲಿ ಬೆಳೆಗಳನ್ನು ಬೆಳೆದು ತಮ್ಮ ಕುಟುಂಬಗಳ ಜೀವನ ನಿರ್ವಹಣೆಯನ್ನು ಮಾಡುತ್ತಿದ್ದು ಅಂತಹವರಿಗೆ ಈವರೆಗೆ ಪಟ್ಟಾ ನೀಡದೆ ಅನ್ಯಾಯ ವೆಸಗಲಾಗುತ್ತಿದೆ. ಅರಣ್ಯ ಜಮೀನನ್ನು ಎಲ್ಲಾ ಜಾತಿಯ ಬಡ ರೈತರು ಅತಿಕ್ರಮಣ ಮಾಡಿ ಸಾಗುವಳಿ ಮಾಡಿಕೊಂಡು ಬರುತ್ತಿರುವÀ ಜಿ.ಪಿ.ಎಸ್ ಮಾಡಿರುವ ಜಮೀನುಗಳನ್ನು ಹಾಗೂ ಜಿ.ಪಿಎಸ್ ಮಾಡದೇ ಇರುವ ಜಮೀನುಗಳನ್ನು ಜಿ.ಪಿ.ಎಸ್ ಮಾಡಿ ರೈತರ ಹೆಸರಿಗೆ ಖಾಯಂ ತರಿಖ್ ಮಂಜೂರು ಮಾಡಿ ಪಟ್ಟಾ ಕೊಡಬೇಕು ಎನ್ನುವುದು ಪ್ರಮುಖ ಬೇಡಿಕೆಯಾಗಿದೆ. ರೈತರಿಗೆ ನ್ಯಾಯ ಒದಗಿಸುತ್ತೇವೆ :- ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಸಚಿವ ದೇಶಪಾಂಡೆ ರೈತರ ಬೇಡಿಕೆ ಸಮಂಜಸವಾಗಿದ್ದು ದಶಕಗಳ ಈ ಸಮಸ್ಯೆಗೆ ಪರಿಹಾರ ಕಲ್ಪಿಸಿ ರೈತರಿಗೆ ನ್ಯಾಯ ದೊರಕಿಸಿ ಕೊಡಲು ಈಗಾಗಲೇ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದು ಬಾಕಿ ಉಳಿದಿರುವ ಕೆಲವು ಪ್ರಕರಣಗಳನ್ನು ಕೂಡ ಸದ್ಯದಲ್ಲೇ ಇತ್ಯರ್ಥಪಡಿಸಿ ರೈತರಿಗೆ ನ್ಯಾಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮೀತಿ ಕೆಂಪು ಸೇನೆ ಉತ್ತರ ಕರ್ನಾಟಕ ಅಧ್ಯಕ್ಷ ರಾಮಚಂದ್ರ ವಡ್ಡರ, ತಾಲೂಕಾಧ್ಯಕ್ಷ ಶಿವಾಜಿ ಮಂಗೇಶ್ಕರ, ಅಶೋಕ ಕೆಸರೆಕರ, ಕೈತಾನ ಕಮ್ರೇಕರ, ಸುಭಾಷ ಜಾಧವ, ಸತ್ತಾರಸಾಬ ಬೆಟಗೇರಿ, ಮಂಜುಳಾ ವಡ್ಡರ, ಮೀನಾಕ್ಷಿ ಇರ್ಲಾ, ಮಾರುತಿ ಸಾವಂತ ಇತರರು ಇದ್ದರು.
Leave a Comment