ಹಳಿಯಾಳ:
ಸಚಿವ ಆರ್.ವಿ.ದೇಶಪಾಂಡೆ ಅವರು ಕೊಟ್ಯಂತರ ರೂ. ಅನುದಾನ ತರುತ್ತಿರುವುದಾಗಿ ಹೇಳುತ್ತಿದ್ದಾರೆ ಆದರೇ ಆ ಹಣ ಎಲ್ಲಿ ಹೋಗುತ್ತಿದೆ ? ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಮಗಾರಿಗಳು ಕಳಪೆಯಾಗುತ್ತಿದೆ ಅಲ್ಲದೇ ಭ್ರಷ್ಟಾಚಾರ ಹೆಚ್ಚಿದ್ದು ಫೆಬ್ರವರಿ ತಿಂಗಳಿನಲ್ಲಿ ಜೆಡಿಎಸ್ ಪಕ್ಷದಿಂದ ಬೃಹತ್ ಹೋರಾಟ ನಡೆಸಲಾಗುವುದು ಎಂದು ಜೆಡಿಎಸ್ ಪಕ್ಷ ತಾಲೂಕಾಧ್ಯಕ್ಷ ಕೈತಾನ ಬಾರಬೋಜಾ ಹೇಳಿದರು. ಪಟ್ಟಣದಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ದಶಕಗಳ ಕಾಲದಿಂದ ಇರುವ ಅರಣ್ಯ ಅತಿಕ್ರಮಣ ಸಮಸ್ಯೆ ಬಗೆಹರಿಸುವ ಬಗ್ಗೆ ಚುನಾವಣೆ ಸಂದರ್ಭದಲ್ಲಿ ಆಶ್ವಾಸನೆ ನೀಡುವ ಸಚಿವ ದೇಶಪಾಂಡೆ ಅವರು ಬಳಿಕ ಅದನ್ನು ಮರೆಯುತ್ತಾರೆ ಅಲ್ಲದೇ ಈಗ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಮತ್ತೇ ಅದೇ ರಾಗ ಹಿಡಿದಿರುವುದು ಸರಿಯಲ್ಲ ಈಗಾಗಲೇ ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿರುವ 90ಸಾವಿರಕ್ಕೂ ಹೆಚ್ಚು ಅರ್ಜಿಗಳಲ್ಲಿ 40 ಸಾವಿರದಷ್ಟು ಅರ್ಜಿಗಳು ತೀರಸ್ಕøತಗೊಂಡಿರುವುದು ದುದೈವದ ಸಂಗತಿ ಎಂದ ಅವರು ರಾಜ್ಯ ಅತಿಕ್ರಮಣದಾರರ ಸಂಘದ ಅಧ್ಯಕ್ಷ ರವೀಂದ್ರ ನಾಯ್ಕರೊಂದಿಗೆ ಸಮಸ್ಯೆ ಕುರಿತು ಈಗಾಗಲೇ ಸಮಾಲೋಚನೆ ನಡೆಸಲಾಗಿದೆ ಎಂದರು. ಇನ್ನೂ ಹಳಿಯಾಳ ಪ್ಯಾರಿ ಸಕ್ಕರೆ ಕಾರ್ಖಾನೆಯವರಿಂದ ರೈತರಿಗೆ ಅನ್ಯಾಯ ಎಸಗಲಾಗುತ್ತಿದೆ ಸ್ಥಳೀಯ ಕಬ್ಬು ಸಾಗಿಸಲು ಪ್ರಾಶಸ್ತ್ಯ ನೀಡದೆ ಹೊರಗಿನ ಕಬ್ಬನ್ನು ತರಲಾಗುತ್ತಿದ್ದು ಅತಿಕ್ರಮಣದಾರರ ಹಾಗೂ ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಶೀಘ್ರ ಪರಿಹಾರಕ್ಕಾಗಿ ಒತ್ತಾಯಿಸಲು ಹಾಗೂ ದಿನನಿತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಣಕ್ಕಾಗಿ ಆಗ್ರಹಿಸಿ, ಅಂಗನವಾಡಿ ಕೇಂದ್ರಗಳಿಗೆ ನೀರಿನ ತೊಂದರೆ, ಶೌಚಾಲಯ ಸಮಸ್ಯೆ, ವೈದ್ಯರ ನೀರ್ಲಕ್ಷ್ಯ, ಇಲಾಖೆಗಳಲ್ಲಿನ ಭ್ರಷ್ಟಾಚಾರದ ವಿರುದ್ದ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದರು. ಇನ್ನೂ ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಹಾಗೂ ಹಳಿಯಾಳ-ಜೋಯಿಡಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂದು ಹೇಳಲಾಗುತ್ತಿರುವ ದಾಂಡೇಲಿಯ ಟಿ.ಆರ್.ಚಂದ್ರಶೇಖರ ಮಾತನಾಡಿ ತಾನು ಕಳೆದ 13 ವರ್ಷಗಳ ಕಾಲ ಜೆಡಿಎಸ್ ಪಕ್ಷದಲ್ಲಿ ನಿಷ್ಟಾವಂತನಾಗಿ ಕಾರ್ಯನಿರ್ವಹಿಸಿದ್ದು ಆ ಸಂದರ್ಭದಲ್ಲಿ ದಾಂಡೇಲಿ ನಗರಸಭೆ ಜೆಡಿಎಸ್ ಅಧಿಕಾರ ಹಾಗೂ ಹಳಿಯಾಳ ಕ್ಷೇತ್ರದಲ್ಲಿ ಸುನಿಲ್ ಹೆಗಡೆ ಶಾಸಕರಾಗಿ ಆಯ್ಕೆಯಾಗಿದ್ದರು ಅಲ್ಲದೇ ಬೂತಮಟ್ಟದಿಂದ ಜೆಡಿಎಸ್ ಭದ್ರಕೊಟೆಯನ್ನೆ ಕಟ್ಟಿದ್ದೇವು ಕಾರಣಾಂತರಗಳಿಂದ ಸುನಿಲ್ ಬಿಜೆಪಿ ಸೇರಿದ ಸಂದರ್ಭದಲ್ಲಿ ತಾವು ಬಿಜೆಪಿ ಪಕ್ಷ ಸೇರಿದ್ದೇವು ಆದರೇ ಕಳೆದ 2 ವರ್ಷಗಳಿಂದ ಬಿಜೆಪಿಯಿಂದ ಕೂಡ ದೂರ ಉಳಿದು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದ್ದೇ ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ತಮ್ಮನ್ನು ಕರೆದು ಹಳಿಯಾಳ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಜವಾಬ್ದಾರಿ ವಹಿಸಿ ನಿಷ್ಠಾವಂತ ಕಾರ್ಯಕರ್ತರು, ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸುವಂತೆ, ಆಂತರಿಕ ಭಿನ್ನಾಭಿಪ್ರಾಯ ಶಮನಗೊಳಿಸುವಂತೆ ಹಾಗೂ ಮುಂದಿನ ಚುನಾವಣೆಗೆ ಸ್ಪರ್ದಿಸಲು ಸಿದ್ದರಾಗುವಂತೆ ಹೇಳಿದ್ದು ತಾವು ಕುಮಾರಸ್ವಾಮಿಯವರ ಆದೇಶದಂತೆ ಕಾರ್ಯನಿರ್ವಹಿಸುತ್ತಿರುವುದಾಗಿ ಸ್ಪಷ್ಟಪಡಿಸಿದರು. ಟಿ.ಆರ್. ಚಂದ್ರಶೇಖರ ಹಾಗೂ ಬಾರಬೋಜಾ ತಮ್ಮ ಜಂಟಿ ಹೇಳಿಕೆಯಲ್ಲಿ ಸಚಿವ ದೇಶಪಾಂಡೆ ತಮ್ಮ 40 ವರ್ಷಗಳ ಅಧಿಕಾರಾವಧಿಯಲ್ಲಿ ಹಳಿಯಾಳ ಭಾಗದಲ್ಲಿ ನೀಜವಾಗಿ ಅಭಿವೃದ್ದಿ ಮಾಡಿದ್ದರೇ ಅವರು ಈ ಸಲದ ಚುನಾವಣೆಯಲ್ಲಿ ಯಾವುದೇ ರೀತಿಯ ಪ್ರಚಾರ ಮಾಡದೆ ಮನೆಯಲ್ಲಿ ಕುಳಿತು ಗೆದ್ದು ತೊರಿಸಲಿ ಎಂದು ಸವಾಲ್ ಹಾಕಿದರು. ಸುದ್ದಿಗೊಷ್ಠಿಯಲ್ಲಿ ಮುಖಂಡರಾದ ಬಡೆಸಾಬ ಕಕ್ಕೇರಿ, ದೇಮನಗೌಡಾ, ದಾವಲಸಾಬ ಅಂಗಡಿ, ಸುಬಾನಿ ಹುಬ್ಬಳ್ಳಿ, ನಸ್ರುಲ್ಲಾಖಾನ್, ಯಲ್ಲಪ್ಪಾ ಹೊನ್ನೊಜಿ ಇದ್ದರು
Leave a Comment