• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಪೋಲಿಸ್ ಕರ್ತವ್ಯಕ್ಕೆ ಅಡ್ಡಿ ;ಇಬ್ಬರ ಬಂಧನ

January 29, 2018 by Yogaraj SK Leave a Comment

ಹಳಿಯಾಳ : ಅಪ್ರಾಪ್ತ ಬಾಲಕಿಯ ಅಪಹರಣ ಮತ್ತು ಅತ್ಯಾಚಾರಕ್ಕೆ ಯತ್ನದ ವಿಷಯ ತಿಳಿಯುತ್ತಿದ್ದಂತೆ ಠಾಣೆಯ ಎದುರು ಜಮಾಯಿಸಿ ಪ್ರತಿಭಟಿಸುತ್ತಿದ್ದ ನೂರಾರು ಜನರಲ್ಲಿ ಇರ್ವರು ಪೋಲಿಸ್ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆಂದು ಆರೋಪಿಸಿ ಅವರನ್ನು ಬಂಧಿಸಿ ಅವರ ಮೇಲೆ ಪ್ರಕರಣ ದಾಖಲಿಸಿರುವ ಘಟನೆ ನಡೆಡಿದೆ.   ಶನಿವಾರ ರಾತ್ರಿ ಸುಮಾರು 11.30 ಗಂಟೆ ಆಸುಪಾಸಿನಲ್ಲಿ ನಡೆದ ಘಟನೆಯಲ್ಲಿ ಯಡೋಗಾದ ಸೈಮನ್ ಇಶಾಂತ ಡಿಸೋಜಾ(26) ಹಾಗೂ ಮಂಗಳವಾಡ (ಕಳಸಾಪುರ) ಗ್ರಾಮದ ಅರ್ಜುನ ಎಲ್ ಬಾಚೋಲಕರ (32) ಮೇಲೆ ಠಾಣೆಯ ಎಸ್‍ಎಚ್‍ಓ ಶಂಕರ ಗುಳೆನ್ನವರ ಅವರು ಪೋಲಿಸರಿಗೆ ಅವ್ಯಾಚ್ಯ ಬೈಯ್ದು, ತಳ್ಳಾಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆಂದು ದೂರು ನೀಡಿದ್ದಾರೆ.  ಬಂಧಿಸಿರುವ ಇಬ್ಬರನ್ನು ಭಾನುವಾರ ಶಿರಸಿ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದ್ದು ಫೆಬ್ರವರಿ ದಿ.2 ರವರೆಗೆ ನ್ಯಾಯಾಂಗ ಬಂಧನಕ್ಕೆ ನ್ಯಾಯಾಧೀಶರು ಆದೇಶಿಸಿದ್ದಾರೆಂದು ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.  ಏನಾಯಿತು:- ದುಷ್ಕøತ್ಯದ ವಿಷಯ ತಿಳಿಯುತ್ತಿದ್ದಂತೆ ಠಾಣೆಯ ಎದುರು ಮಹಿಳೆಯರು, ಯುವಕರು ಸೇರಿದಂತೆ ನೂರಾರು ಜನರು ಜಮಾಯಿಸಿ ಆರೋಪಿಗೆ ಕಠಿಣ ಶೀಕ್ಷೆ ನೀಡುವಂತೆ ಆಗ್ರಹಿಸುತ್ತಿದ್ದರು ಈ ಸಂದರ್ಭದಲ್ಲಿ ಪೋಲಿಸರು ಪೊಕ್ಸೊ ಪ್ರಕರಣದ ಆರೋಪಿ ಅಬ್ದುಲ್‍ಕರೀಮನನ್ನು ವೈದ್ಯಕೀಯ ತಪಾಸಣೆಗೆ ಒಯ್ಯುವಾಗ ಆರೋಪಿಯನ್ನು ಸಾರ್ವಜನೀಕರ ವಶಕ್ಕೆ ನೀಡುವಂತೆ ಜನ ಪಟ್ಟು ಹಿಡಿದರು ಆದರೂ  ಚಾಣಾಕ್ಷತನದಿಂದ ಪೋಲಿಸರು ಆರೋಪಿಯನ್ನು ಅಲ್ಲಿಂದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು ಆದರೇ ಬಳಿಕ ಇದ್ದಕ್ಕಿಂದ್ದಂತೆ ಠಾಣೆಯ ಎದುರು ಪೋಲಿಸರ ಮತ್ತು ಸಾರ್ವಜನೀಕರ ಮಧ್ಯೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದ್ದು ಈ ಸಂದರ್ಭದಲ್ಲಿ ಇರ್ವರನ್ನು ಠಾಣೆಯ ಒಳಗೆ ಕರೆದೊಯ್ದು ಪೋಲಿಸ್ ಆತಿಥ್ಯ ನೀಡಲಾಗಿದ್ದು ಇದು ಸಾರ್ವಜನೀಕರ ಆಕ್ರೋಶಕ್ಕೆ ಕಾರಣವಾಗಿದೆ.  ಓರ್ವ ಆರೋಪಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಸೈಮನ್ ಡಿಸೋಜಾ ರಾಷ್ಟ್ರೀಯ ವಾಲಿಬಾಲ್ ಕ್ರೀಡಾಪಟುವಾಗಿದ್ದು ಅಂಗವಿಕಲನಾಗಿದ್ದಾನೆ ಅಲ್ಲದೇ ಇನ್ನೊರ್ವ ಅರ್ಜುನ್ ಬಾಚೋಲಕರ ಮಂಗಳವಾಡ ಗ್ರಾಮ ಪಂಚಾಯತಿಯ ಸದಸ್ಯನಾಗಿರುವುದು ತೀವೃ ಚರ್ಚೆಗೆ ಗ್ರಾಸವಾದ ವಿಷಯವಾಗಿದೆ.  ಅಮಾಯಕರನ್ನು ಬಂಧಿಸಲಾಗಿದೆ ಎಂದು ಕ್ರೈಸ್ತ ಸಮುದಾಯದ ಮುಖಂಡರು, ಸಾರ್ವಜನೀಕರು ಭಾನುವಾರ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.   ಘಟನೆಯ ಬಗ್ಗೆ ಅರಿತ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ, ಪುರಸಭೆ ಅಧ್ಯಕ್ಷ ಶಂಕರ ಬೆಳಗಾಂವಕರ ಸೇರಿದಂತೆ ಮರಾಠಾ ಸಮುದಾಯದ ಮುಖಂಡರು ಠಾಣೆಗೆ ಭೇಟಿ ಘಟನೆಯನ್ನು ಖಂಡಿಸಿದರಲ್ಲದೇ ಇಬ್ಬರು ಅಮಾಯಕರ ಮೇಲೆ ಹಾಕಲಾಗಿರುವ ಪ್ರಕರಣ ಹಿಂಪಡೆಯುವಂತೆ ಆಗ್ರಹಿಸಿದರು.  ಮಾಜಿ ಶಾಸಕ ಸುನೀಲ್ ಹೆಗಡೆ ಸೇರಿದಂತೆ ಬಿಜೆಪಿ ಮುಖಂಡರು ಠಾಣೆಗೆ ಭೆಟಿ ನೀಡಿ ಅಮಾಯಕರ ಮೇಲಿನ ಹಲ್ಲೆ ಸರಿಯಲ್ಲ ಅವರ ಮೇಲೆ ಹಾಕಲಾಗಿರುವ ಪ್ರಕರಣ ಹಿಂಪಡೆಯುವಂತೆ ಒತ್ತಾಯಿಸಿದರು.  ಅಪಹರಣ ಹಾಗೂ ಅತ್ಯಾಚಾರ ಯತ್ನ ಪ್ರಕರಣದಲ್ಲಿ ಪೋಲಿಸರು ತೋರಿದ ಚಾಣಾಕ್ಷತನ ಹಾಗೂ ತಕ್ಷಣ ಆರೋಪಿಯನ್ನು ಬಂಧಿಸಿರುವ ಬಗ್ಗೆ ಮುಖಂಡರು ಹಾಗೂ ಸಾರ್ವಜನೀಕರು ಶ್ಲಾಘಣೆ ವ್ಯಕ್ತಪಡಿಸಿದ್ದಾರೆ. ಹಿರಿಯ  ಪೋಲಿಸ್ ಅಧಿಕಾರಿಗಳು ಇಬ್ಬರು ಪೋಲಿಸರ ಕರ್ತವ್ಯದಕ್ಷತೆ ಮೆಚ್ಚಿ ಪ್ರಶಸ್ತಿ ನೀಡುವಂತೆಯು ಆಗ್ರಹಿಸುತ್ತಿರುವುದು ಕೇಳಿ ಬರುತ್ತಿತ್ತು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News Tagged With: ಅಡ್ಡಿ, ಅತ್ಯಾಚಾರ, ಅಪಹರಣ, ಅಪ್ರಾಪ್ತ ಬಾಲಕಿ, ಅಲ್ಪಸಂಖ್ಯಾತ ಸಮುದಾಯ, ಇಬ್ಬರ ಬಂಧನ, ಓರ್ವ ಆರೋಪಿ, ಕರ್ತವ್ಯಕ್ಕೆ ಅಡ್ಡಿ, ತಳ್ಳಾಡಿ, ಪೋಲಿಸರಿಗೆ ಅವ್ಯಾಚ್ಯ ಬೈಯ್ದು, ಪೋಲಿಸ್ ಕರ್ತವ್ಯ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar