ಹೊನ್ನಾವರ: ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳ ಹಾಗೂ ಶ್ರೀ ಶ್ರೀ ವಿಧುಶೇಖರ ಭಾರತೀ ತೀರ್ಥಮಹಾಸ್ವಾಮಿಗಳ ದಿವ್ಯ ಅನುಗ್ರಹದೊಂದಿಗೆ ತಾಲೂಕಿನ ಬಳ್ಕೂರಿನ ಶ್ರೀ ನೀಲಗೋಡ ಕ್ಷೇತ್ರದಲ್ಲಿ ಸಹಸ್ರ ಚಂಡಿಕಾಯಾಗ ಹಾಗೂ ನೀಲಗೋಡ ಉತ್ಸವ ನಡೆಯಿತು. ಕೇವಲ ಕೆಲವೇ ವರ್ಷಗಳಲ್ಲಿ ರಾಜ್ಯ ಹೊರ ರಾಜ್ಯಗಳಲ್ಲಿ ಅತ್ಯಂತ ಪ್ರಸಿದ್ದಿಯನ್ನು ಪಡೆದಿರುವ ನೀಲಗೋಡ ಕ್ಷೇತ್ರದಲ್ಲಿ 4 ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಸಹಸ್ರ ಚಂಡಿಕಾಯಾಗದಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆದರು.
ಪರಮ ಪೂಜ್ಯನೀಯ ಶ್ರೀ ಶ್ರೀ ರಾಮಾನಂದ ಅವಧೂತ ಮಹಸ್ವಾಮಿಗಳು ದೀವಗಿಯವರ ಸಂಕಲ್ಪದಂತೆ ಅವರ ದಿವ್ಯ ಉಪಸ್ದಿತಿಯಲ್ಲಿ ಲೋಕಕಲ್ಯಾಣಾರ್ಥವಾಗಿ ಸಹಸ್ರ ಚಂಡಿಕಾಯಾಗ ನಡೆಯಿತು. ಬಂಗಾರಮಕ್ಕಿ ಕ್ಷೇತ್ರದ ಧರ್ಮಾಧಿಕಾರಿ ಶ್ರೀ ಶ್ರೀ ಮಾರುತಿ ಗುರುಜಿಯವರಿಂದ ಆರ್ಶಿವಚನ ನಡೆಯಿತು. ನೀಲಗೋಡ ಕ್ಷೇತ್ರದ ಪ್ರಧಾನ ಅರ್ಚಕ ಮಾದೇವ ಸ್ವಾಮಿಯವರ ನೇತ್ರತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕ್ಷೇತ್ರದ ವಾರ್ಷಿಕವರ್ಧಂತಿ, ನೀಲಗೋಡ ಉತ್ಸವ, ಸಪ್ತಶತಿ ಪಾರಾಯಣ, ಆಂಜನೇಯ ಮೂಲ ಮಂತ್ರ ಹೋಮ, ಅಷ್ಟಾವಧಾನ ಸೇವೆ, ಹಾಗೂ ಮಹಾ ಅನ್ನಸಂತರ್ಪಣೆಗಳು ನಡೆದವು. ಜಗದ್ಗುರು ಶಂಕರಾಚಾರ್ಯ ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿ ಸಂಚಾರಿ ಪೀಠ ಇವರಿಂದ ಆರ್ಶಿವಚನ ನಡೆಯಿತು. ವೇದಮೂರ್ತಿ ಶ್ರೀಧರ ಭಟ್ಟ ಷಡಕ್ಷರಿ ಗೋಕರ್ಣ, ವೇದಮೂರ್ತಿ ಸತ್ಯನಾರಾಯಣ ಯಾಜಿ ಬಳ್ಕೂರು ಇವರ ಆಚಾರ್ಯತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಭಟ್ಕಳ ಶಾಸಕ ಮಂಕಾಳ ವೈದ್ಯ, ಬಿಜೆಪಿ ಮುಖಂಡ ಯಶೋದರ ನಾಯ್ಕ, ಮಾಜಿ ಸಚಿವ ಶಿವಾನಂದ ನಾಯ್ಕ, ಸುನೀಲ ನಾಯ್ಕ, ಸುರಜ್ ನಾಯ್ಕ ಸೋನಿ, ಜಿಲ್ಲಾ ಪಂಚಾಯತ ಸದಸ್ಯೆ ಪುಷ್ಪಾಜಿ.ನಾಯ್ಕ, ಮುಂತಾದ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Leave a Comment