ಹಳಿಯಾಳ:- ಧಾರವಾಡದ ವಕೀಲ ಬಿಐ ದೊಡಮನಿ ಮೇಲೆ ಅಪರಿಚಿತರು ಸೋಮವಾರ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದನ್ನು ಖಂಡಿಸಿ ಹಳಿಯಾಳ ವಕೀಲರ ಸಂಘದ ಸದಸ್ಯರು ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಸಂಘದ ಅಧ್ಯಕ್ಷ ಅಶೋಕ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಲ್ಲೆ ಘಟನೆಯನ್ನು ಖಂಡಿಸಿ ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಆಗ್ರಹಿಸಲಾಯಿತು. ಎಂದಿನಂತೆ ನ್ಯಾಯಾಲಯದ ಕಾರ್ಯಕಲಾಪಗಳಿಗೆ ಹಾಜರಾಗಲು ಬಂದಿದ್ದ ಧಾರವಾಡ, ಯಲ್ಲಾಪೂರ, ದಾಂಡೇಲಿ ಇನ್ನಿತರ ಭಾಗದ ವಕೀಲರು ಸಹ ಹಳಿಯಾಳ ವಕೀಲರ ಸಂಘದ ನಿರ್ಣಯಕ್ಕೆ ಬೆಂಬಲ ಸೂಚಿಸಿ ಕಲಾಪದಿಂದ ದೂರ ಉಳಿದರು. ಸಂಘದ ಸದಸ್ಯರಾದ ಸಿವಿ ಚುಚ್ಚಂಬ್ಲಿ, ಸುರೇಖಾ ಗುನಗಾ, ರಾಧಾರಾಣಿ ಕೊಳಂಬಿ, ಎಸ್.ಎಸ್.ಕಾನಕತ್ರಿ, ಎಮ್.ಜುಂಜವಾಡಕರ, ವಿವಿರೆಡ್ಡಿ,ಎಸ್ವೈ ಗುಪಿತ, ಸಂತೋಷ ಹಬ್ಬು, ಎಪಿ ಮುಜಾವರ, ಪ್ರಕಾಶ ಅಂಗಡಿ, ಎಫ್ಕಿತ್ತೂರ, ಬಿವಿ ರಜಪೂತ, ಎಸ್.ಕೊಂಜಾಳಿ, ಸುಪ್ರಿತಾ ಕಲಾಜ, ಶ್ರುತಿ ಗರಡೊಳಕರ, ಸಂಗೀತಾ ಕಾಮ್ರೇಕರ, ಮಹಾದೇವಿ ಅಂಗಡಿ, ಎಮ್.ಅಷ್ಟೇಕರ, ಗಣೇಶ ಸೊಲ್ಲಾಪುರಿ ಇತರರು ಇದ್ದರು.
Leave a Comment