ಹಳಿಯಾಳ : ವ್ಹಿ.ಆರ್.ದೇಶಪಾಂಡೆ ಮೆಮೊರಿಯಲ್ ಟ್ರಸ್ಟ್, ಉತ್ಕರ್ಷ ಉ.ಕ ಸಮಗ್ರ ಗ್ರಾಮೀಣ ಅಬೀವೃದ್ದಿ ಯೋಜನೆ ಹಾಗೂ ರಾಜ್ಯ ಕುಸ್ತಿ ಅಸೋಸಿಯೆಶನ್ ರವರ ಆಶ್ರಯದಲ್ಲಿ ದಿ.ವಿಶ್ವನಾಥರಾವ ರಘುನಾಥರಾವ ದೇಶಪಾಂಡೆ ಸ್ಮರಣಾರ್ಥ ಫೆಬ್ರುವರಿ 10 ರಿಂದ 12 ರವರೆಗೆ ಮೋತಿಕೆರೆಯ ಹತ್ತಿರದ ಜಿಲ್ಲಾ ಕುಸ್ತಿ ಆಖಾಡದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ವಿ.ಆರ್.ಡಿ.ಎಮ್ ಟ್ರಸ್ಟ ಆಡಳಿತಾಧಿಕಾರಿ ಪ್ರಕಾಶ ಪ್ರಭು ಪತ್ರಿಕಾಗೊಷ್ಠಿಯಲ್ಲಿ ತಿಳಿಸಿದರು. ಮಹಾನ ಭಾರತ ಕೇಸರಿ, ಕರ್ನಾಟಕ ಕಂಠೀರವ + 70 ಕೆ.ಜಿ ವಿಭಾಗ ಪ್ರಥಮ 2 ಲಕ್ಷ 50 ಸಾವಿರ ನಗದು ಮತ್ತು ಗದೆ, ದ್ವಿತೀಯ 1 ಲಕ್ಷ 10 ಸಾವಿರ ತೃತೀಯ ತಲಾ ಎರಡು ಬಹುಮಾನ 55 ಸಾವಿರ , ಕರ್ನಾಟಕ ಕೇಸರಿ 70 ಕೆ.ಜಿ ವಿಭಾಗ ಪ್ರಥಮ 50 ಸಾವಿರ, ದ್ವೀತೀಯ 25 ಸಾವಿರ, ತೃತೀಯ ತಲಾ ಎರಡು ಬಹುಮಾನ 15 ಸಾವಿರ , ಕರ್ನಾಟಕ ಕುಮಾರ 65 ಕೆ.ಜಿ ವಿಭಾಗ ಪ್ರಥಮ 20 ಸಾವಿರ +ಗದೆ, ಕರ್ನಾಟಕ ಕಿಶೋರ 61 ಕೆ.ಜಿ ವಿಭಾಗ ಪ್ರಥಮ 15 ಸಾವಿರ+ಗದೆ, ಕರ್ನಾಟಕ ಚಾಂಪಿಯನ್ 57 ಕೆ.ಜಿ ವಿಭಾಗ ಪ್ರಥಮ 15 ಸಾವಿರ + ಆಕರ್ಷಕ ಟ್ರೋಫಿ ಕಿರಿಯರ ವಿಭಾಗ ಜ್ಯೂನಿಯರ್ ಕೇಸರಿ ಪ್ರಸಿದ್ಧ ಪೈಲವಾನ್ ಶ್ರೀ ಆಗ್ನೇಲ್ ನಿಗ್ರೋ ಇವರ ಸ್ಮರಣಾರ್ಥ ಬಹಮಾನ ನೀಡಲಾಗುವುದು. ವೀರಮಾತಾ ಕಿತ್ತೂರ ಚೆನ್ನಮ್ಮಾ ಬಾರತ ಕೇಸರಿ ಪ್ರಶಸ್ತಿ, 54 ಕೆ.ಜಿ ವಿಭಾಗ 50 ಸಾವಿರ + ಗದ್ದೆ ದ್ವಿತಿಯ 25 ಸಾವಿರ ತೃತೀಯ ತಲಾ 2 ಬಹುಮಾನ 12 ಸಾವಿರ, ಒನಕೆ ಒಬವ್ವ ಕರ್ನಾಟಕ ಕೇಸರಿ 54 ಕೆ.ಜಿ. ವಿಬಾಗ ಪ್ರಥಮ 25 ಸಾವಿರ + ಗದೆ, ದ್ವಿತೀಯ 15 ಸಾವಿರ, ತೃತೀಯ ತಲಾ 2 ಬಹುಮಾನ 10 ಸಾವಿರ. ಅದರಂತೆ 54, 50, 46, 42,38, 35, 32, 29, ಕೆ.ಜಿ. ವಿಭಾಗದಲ್ಲಿ ಬಾಲಕ ಹಾಗೂ ಬಾಲಕಿಯರ ಕುಸ್ತಿ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ. ಫೆ.10 ರಂದು ಶನಿವಾರ ಬೆಳಿಗ್ಗೆ 9.00 ರಿಂದ 11 ರವರೆಗೆ ದೇಹದ ತೂಕವನ್ನು ತೆಗೆದುಕೊಳ್ಳಲಾಗುವುದು ಫೆ. 12 ರಂದು ಬಾರತದÀ ಪ್ರಪ್ರಥಮ ಮಹಿಳಾ ಒಲಂಪಿಕ ಪದಕ ವಿಜೇತೆ ಕುಸ್ತಿಪಟು ಸಾಕ್ಷಿ ಮಲೀಕ್ ಆಗಮಿಸಲಿದ್ದಾರೆ. ಸಚಿವ ಆರ್ ವಿ ದೇಶಪಾಂಡೆ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ. ವಿ.ಪ.ಸದಸ್ಯ ಎಸ್ ಎಲ್ ಘೊಟ್ನೇಕರ ಸೇರಿದಂತೆ ಪ್ರಮುಖರು ಉಪಸ್ಥಿತರಿರುವರು ಎಂದು ಪ್ರಭು ತಿಳಿಸಿದ್ದಾರೆ.
Leave a Comment