ಹಳಿಯಾಳ:
ಆತ್ಮ ವಿಶ್ವಾಸÀವಿದ್ದರೆ ಪರೀಕ್ಷೆ ಎದುರಿಸಿವುದು ಸುಲಭ, ಆತ್ಮವಿಶ್ವಾಸಕ್ಕೆ ಏಕಾಗ್ರತೆ ಬಹು ಮುಖ್ಯ ಯಾವುದೇ ವಿಷಯಗಳನ್ನು ಸಂತೋಷದಿಂದ ಸ್ವೀಕರಿಸಿದಾಗ ಮಾತ್ರ ಆ ವಿಷಯ ಹೆಚ್ಚು ನೆನಪುಳಿಯಲು ಸಾಧ್ಯ, ಕಷ್ಟಗಳನ್ನು ಪ್ರೀತಿಯಿಂದ ಸ್ವೀಕರಿಸಬೇಕು. ಕಷ್ಟಗಳನ್ನು ಎದುರಿಸಿದಾಗ ಮಾತ್ರ ಜೀವನದಲ್ಲಿ ಯಶಸ್ವು ಸಾಧ್ಯವೆಂದು ಹಿಮಾಚಲ ಪ್ರದೇಶದ ಸೋಲನ್ ರಾಷ್ಟ್ರೀಯ ಅಣಬೆ ಸಂಶೋಧನಾ ಕೇಂದ್ರದ ಯುವ ವಿಜ್ಞಾನಿ ಡಾ|| ಮಹಾಂತೇಶ ಶಿರೂರ ಅಭಿಪ್ರಾಯಪಟ್ಟರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಹೊಂಗಿರಣ ಸಾಂಸ್ಕøತಿಕ ಮತ್ತು ಸಾಮಾಜಿಕ ಸಂಸ್ಥೆ ಸಹಯೋಗದಲ್ಲಿ ಪಟ್ಟಣದ ಕಾರ್ಮೆಲ್ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ಎಎಸ್ಎಸ್ಎಲ್ಸಿ ಮಕ್ಕಳಿಗೆ “ವ್ಯಕ್ತಿತ್ವ ವಿಕಸನ ಮತ್ತು ಪ್ರೇರಣಾ ಶಿಬಿರ”ವನ್ನು ಉದ್ಘಾಟಿಸಿ ಮಾತನಾಡಿದರು. 3ಗಂಟೆಗಳ ಕಾಲ ವಿಧ್ಯಾರ್ಥಿಗಳಿಗೆ ವಿವಿಧ ಪ್ರಾಯೋಗಿಕ ಚಟುವಟಿಕೆಗಳನ್ನು ಮಾಡಿಸುತ್ತಾ ಅವರಲ್ಲಿ ಏಕಾಗ್ರತೆ, ಸಮಯದ ಸದುಪಯೋಗ ಮತ್ತು ಪರೀಕ್ಷಾ ಪೂರ್ವ ತಯಾರಿ ಸೇರಿದಂತೆ ಹಲವಾರು ವಿಷಯ ಹಾಗೂ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಧೈರ್ಯದಿಂದ ಪರೀಕ್ಷೆ ಎದುರಿಸಲು ಪ್ರೇರೆಪಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಮ್ ಮುಲ್ಲಾ ವಹಿಸಿದ್ದರು. ಕ್ಷೇತ್ರ ಸಮನ್ವಯಾಧಿಕಾರಿ ಜಯಲಕ್ಷ್ಮೀ ಅರ್ಕಸಾಲಿ, ಜಿಲ್ಲಾ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ದಿನೇಶ ನಾಯ್ಕ, ಶಿಕ್ಷಕರಾದ ಸಿದ್ದಪ್ಪ ಬಿರಾದಾರ, ವಿಠ್ಠಲ್ ಬೋರೇಕರ, ಮಲ್ಲಿಕಾರ್ಜುನ್, ಶಿಕ್ಷಣ ಸಂಯೋಜಕ ಅರುಣ ನಾಯ್ಕ ಇದ್ದರು. ಕಾರ್ಯಕ್ರಮದಲ್ಲಿ ಶಿಕ್ಷಕ ಕಾಳದಾಸ ಬಡಿಗೇರ ವಿರಚಿತ ಸುರೇಂದ್ರ ಬಿರ್ಜೆ ಸಂಗೀತ ಸಂಯೋಜನೆಯ ಜೇಮ್ಸ್ ಡಿಸೋಜಾ ಧ್ವನಿ “ಭರವಸೆ” ಎಂಬ ಗೊಂಬೆಯಾಟವನ್ನು ಹೊಂಗಿರಣ ಸಂಸ್ಥೆಯವರು ನಡೆಸಿಕೊಟ್ಟಿದ್ದು ಶಿಬಿರದ ವಿಶೇಷ ಆಕರ್ಷಣೆಯಾಗಿತ್ತು.
Leave a Comment